ಗದ್ದುಗೆ ಹಿಡಿದ “ಕೈ” 100 ಕೋಟಿ ಸಾಲ ನೀಡುವ ಭರವಸೆ: ಜಿ ವೆಂಕಟೇಶ್ ಗೌಡ
(KOLARA): ಅಧಿಕಾರ ದರ್ಪದಿಂದ ಕೂಡಿದ ಆಡಳಿತ ವಾಗಬಾರದು ಸೇವಾ ಮನೋಭಾವದ ಪ್ರವೃತ್ತಿಯಾಗಬೇಕು ಆಗ ಮಾತ್ರ ಜನಮಾನಸದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ಬಲಮಂದೆ ವಿ ಎಸ್ ಎಸ್ ಎನ್ ಹಾಲಿ ಅಧ್ಯಕ್ಷ ಜಿ ವೆಂಕಟೇಶ್ ಗೌಡ ಅಭಿಪ್ರಾಯಪಟ್ಟರು.
ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಬಲಮಂದೆ ವ್ಯವಸಾಯ ಸಹಕಾರ ಸೇವಾ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿದೆ, ಇಂತಹ ರೈತಾಪಿ ವರ್ಗದ ಏಳಿಗೆಗಾಗಿ ಸೇವೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ.ಚುನಾವಣೆಯಲ್ಲಿ ಗೆದ್ದವರು ರೈತ ಸಮುದಾಯದ ಪರ ಕಾರ್ಯನಿರ್ವಹಿಸಿದಾಗ ಅವರ ಭವಿಷ್ಯ ಉಜ್ವಲ ಗೊಳಿಸುತ್ತದೆ, ಕಳೆದ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಿದ ಫಲವಾಗಿ ಮತ್ತೆ ನನ್ನ ನೇತೃತ್ವದ ತಂಡಕ್ಕೆ ರೈತರು ಹೆಚ್ಚಿನ ಮತ ನೀಡುವುದರ ಮೂಲಕ ಆಶೀರ್ವಾದ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ 100 ಕೋಟಿ ಸಾಲ ನೀಡುವ ಗುರಿ ಹೊಂದಿದ್ದು ರೈತರಿಗಾಗಿ ಸೀಮಿತವಾಗಿರುವ ಸಂಸ್ಥೆಯನ್ನು ಅತ್ಯಂತ ಜವಾಬ್ದಾರಿಯಿಂದ ಮುನ್ನಡೆಸುತ್ತೇನೆ ಎಂದರು.
“ಕೈ” ಹಿಡಿದ ಮತದಾರ, ಗದ್ದುಗೆ ಹಿಡಿದ ಕಾಂಗ್ರೆಸ್
ತಾಲೂಕಿನಲ್ಲಿ ಪ್ರತಿಷ್ಠಿತ ಕಣವಾದ ಬಲಮಂದೆ ವ್ಯವಸಾಯ ಸೇವಾ ಸಹಕಾರ ಸಂಘದ 12 ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜಿ ವೆಂಕಟೇಶಗೌಡ ನೇತೃತ್ವದ ಕಾಂಗ್ರೆಸ್ ಬೆಂಬಲಿತರು 10 ಜನ ನಿರ್ದೇಶಕರುಗಳಾಗಿ ಗೆಲುವು ಸಾಧಿಸಿದರು ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾದವು ಎಂದು ತಿಳಿಸಿದರು.
ನೂತನ ನಿರ್ದೇಶಕರು
ವಿ ಎಸ್ ಎಸ್ ಏನ್ ಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕನಮನಹಳ್ಳಿ ಕೆ ವಿ ಮಂಜುನಾಥ್, ಭೀಮಗಾನಹಳ್ಳಿ ಎನ್ ಮುರುಗೇಶ್, ದಿನ್ನೂರು ಆರ್ ಸಂಪಂಗಿ, ಬಲ ಮಂದೆ ಬಿ ಎಂ ನಾರಾಯಣಪ್ಪ ಮತ್ತು ಬಿಸಿಎಂಎ ಕ್ಷೇತ್ರದಿಂದ ತಮಟಮಾಕನಹಳ್ಳಿ ವೆಂಕಟೇಶ್ ಶೆಟ್ಟಿ, ಬಿಸಿಎಂ ಬಿ ಕ್ಷೇತ್ರದಿಂದ ಕನಮನಹಳ್ಳಿ ವೈ ಮನೋಜಿ ರಾವ್, ಎಸ್ ಸಿ ಮೀಸಲು ಕ್ಷೇತ್ರದಿಂದ ಪಲಮಡುಗು ಜಿ ದೇವರಾಜ್, ಎಸ್ ಟಿ ಮೀಸಲು ಕ್ಷೇತ್ರದಿಂದ ಬಲಮಂದೆ ಚಂದ್ರಪ್ಪ, ಮಹಿಳಾ ಮೀಸಲು ಕ್ಷೇತ್ರದಿಂದ ಅಂಬುಬಾಯಿ, ಸಾಲಮ್ಮ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಬಿಕೆ ಮಂಜುನಾಥ್ ಗೆಲುವು ಸಾಧಿಸಿದ್ದಾರೆ ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣಪ್ಪ, ಸಿ ಇ ಓ ವೇಣು ಗೋಪಾಲ್ ಕರ್ತವ್ಯ ನಿರ್ವಹಿಸಿದ್ದರು.
ವರದಿ: ವಿಷ್ಣು ಕೋಲಾರ