ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ 11 ಮಂದಿ ಅವಿರೋಧವಾಗಿ ಆಯ್ಕೆ.
(KOLARA): ಬಂಗಾರಪೇಟೆ:ತಾಲೂಕಿನ ಹುಣಸನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ 11 ಮಂದಿ ಅವಿರೋಧವಾಗಿ ಆಯ್ಕೆ ಹಾಗೂ ಒಂದು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು ಎಂದು ಚುನಾವಣಾ ಅಧಿಕಾರಿ ಬಾಲಕೃಷ್ಣ ತಿಳಿಸಿದರು.
ಇಂದು ನಡೆದ ಸಾಲಗಾರರಲ್ಲದ ಕ್ಷೇತ್ರದ ನಿರ್ದೇಶಕರ ಚುನಾವಣೆಯಲ್ಲಿ ಕೆಂಪಣ್ಣ ಹಾಗೂ ಸಂತೋಷ್ ಕುಮಾರ್ ನಡುವೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸಂತೋಷ್ ಕುಮಾರ್ 2 ಮತ ಪಡೆದುಕೊಂಡರು ಹಾಗೂ ಕೆಂಪಣ್ಣ 5 ಮತ ಪಡೆದುಕೊಂಡು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು :
ಎಂ.ಗೋವಿಂದಪ್ಪ, ಮತ್ತು ನಾರಾಯಣಪ್ಪ ಠೇವಣಿದಾರರ ಸ್ಥಾನದಿಂದ ಶಂಕರಪ್ಪ, ಸಾಲಗಾರರ ಬಿಸಿಎಂ (ಬಿ) ಸ್ಥಾನದಿಂದ ಸಿ.ಮಾದೇಶ್ಗೌಡ, ಸಾಲಗಾರರ ಮಹಿಳಾ ಮೀಸಲು ಸ್ಥಾನದಿಂದ ಮುನಿಯಮ್ಮ ಮತ್ತು ವಿ.ಎಸ್. ವೀಣಾ, ಸಾಲಗಾರರ ಪರಿಶಿಷ್ಟ ಜಾತಿ ಸ್ಥಾನದಿಂದ ಎಚ್.ಆರ್ ಶ್ರೀನಿವಾಸ್, ಸಾಲಗಾರರ ಬಿಸಿಎಂ (ಎ) ಸ್ಥಾನದಿಂದ ನಾರಾಯಣಸ್ವಾಮಿ, ಸಾಲಗಾರರ ಪರಿಶಿಷ್ಟ ಪಂಗಡ ಸ್ಥಾನದಿಂದ ಲಕ್ಷ್ಮಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.
ಈ ವೇಳೆ ನೂತನ ನಿರ್ದೇಶಕರಾದ ಎಚ್.ಆರ್ ಶ್ರೀನಿವಾಸ್ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಹಾಗೂ ನೂತನವಾಗಿ ಸಂಘದ ಕಚೇರಿಯನ್ನು ಕಟ್ಟಲಾಗುತ್ತದೆ ಎಂದು ತಿಳಿಸಿದರು.
ಸಂಘದಿಂದ ವಿವಿಧ ರೀತಿಯ ಸಾಲ ನೀಡಲಾಗುವುದು, ರೈತರು ಸ್ವಾವಲಂಬಿ ಜೀವನವನ್ನು ನಿರ್ವಹಿಸಲು ಮತ್ತು ಕೃಷಿ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು. ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವನ್ನು ವಿತರಿಸುವ ಮೂಲಕ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿ ಸಂಘವನ್ನು ಲಾಭದಾಯಕವಾಗಿ ನಡೆಸಿಕೊಂಡು ಬರುತ್ತೇವೆ. ಎಲ್ಲಾ ನಿರ್ದೇಶಕರ ವಿಶ್ವಾಸದೊಂದಿಗೆ ಕೆಲಸವನ್ನು ಮಾಡುವುದರ ಮೂಲಕ ಪ್ರಾಮಾಣಿಕವಾಗಿ ಪಾರದರ್ಶಕವಾದ ಆಡಳಿತವನ್ನು ನೀಡುವುದಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ವಿ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಗೋಪಾಲಪ್ಪ, ಜಯರಾಮ್, ರಮೇಶ್, ಬಾಲಕೃಷ್ಣ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ