ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಬಡಾವಣೆಗಳಿಗೆ 11ಬಿ ಖಾತೆಗಳ ಹಗರಣವನ್ನು ಸಿ.ಬಿ.ಐ.ಗೆ ಒಪ್ಪಿಸಿ ಪಟ್ಟಣದಲ್ಲಿ ರೈತ ಸಂಘದಿಂದ ಒತ್ತಾಯ
(KOLARA): ಬಂಗಾರಪೇಟೆ: ಬಂಗಾರಪೇಟೆ – ಕೆ.ಜಿ.ಎಫ್, ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಬಡಾವಣೆಗಳಿಗೆ 11ಬಿ ಖಾತೆಗಳ ಹಗರಣವನ್ನು ಸಿ.ಬಿ.ಐ.ಗೆ ಒಪ್ಪಿಸಿ ನರೇಗಾ ಕಾಮಗಾರಿಗಳನ್ನು ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿ ಬರದಿಂದ ತತ್ತರಿಸಿರುವ ರೈತ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ, ಕುಟುಂಬಗಳನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿoದ ತಾಲ್ಲೂಕು ಪಂಚಾಯಿತಿ ಮುಂದೆ ಚನಕೆ, ಗುದ್ದಲಿ, ಮುಖಾಂತರ ಹೋರಾಟ ಮಾಡಿ, ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಒತ್ತಾಯಿಸಲಾಯಿತು.
ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಉದ್ದೇಶದಂತೆ ಕಷ್ಟಾಪಟ್ಟು ದುಡಿದು ಕೂಡಿಟ್ಟಿರುವ ಹಣದಲ್ಲಿ ಮದ್ಯಮ ವರ್ಗದ ಜನರು ನಿವೇಶನ ಖರೀದಿ ಮಾಡುವ ಮುನ್ನ ಸೂಕ್ತ ದಾಖಲೆಗಳನ್ನು ಪರಿಶೀಲನೆ ಪರಿಶೀಲಿಸಿ ಕೊಳ್ಳದೆ ಸರ್ಕಾರಿ ಗೋಮಾಳ ಗುಂಡುತೋಪು, ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್ಗಳನ್ನು ಅಭಿವೃದ್ದಿ ಪಡಿಸಿ ಪಂಚಾಯಿತಿಗಳಲ್ಲಿ ಅಭಿವೃದ್ದಿ ಅಧಿಕಾರಿಗಳನ್ನು ಆಡಳಿತ ಮಂಡಳಿಯನ್ನು ಕೈಕಟ್ಟಿಕೊಂಡು ಲೇಔಟ್ ಮಾಲೀಕರು ಅಕ್ರಮ ಖಾತೆಗಳನ್ನು ಮಾಡಿಕೊಳ್ಳುವ ಮುಖಾಂತರ ಬಡವರ ಬದುಕನ್ನು ಕಸಿಯುತ್ತಿರುವ ದಂದೆ ಬಂಗಾರಪೇಟೆ-ಕೆ.ಜಿ.ಎಫ್ ಪಂಚಾಯ್ತಿಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ, ಹಿರಿಯ ಅಧಿಕಾರಿಗಳ ಮೌನವೇಕೆ ಎಂದು ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಹಿರಿಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಕೆ.ಜಿ.ಎಫ್ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿ ಈಗಾಗಲೇ ಎರಡೂ ತಾಲ್ಲೂಕಿನ ಪಂಚಾಯ್ತಿಗಳಲ್ಲಿ 2500 ಬಿ ಖಾತೆಗಳು ಅಕ್ರಮ ಲೇಔಟ್ಗಳಿಗೆ ಸೃಷ್ಟಿಸಿರುವ ಬಗ್ಗೆ ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪತ್ರದ ಮುಖಾಂತರ ಬರೆದಿದ್ದು, ಇದನ್ನು ಮಾನ್ಯರು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಯಾವುದೇ ಬಡಾವಣೆ ಅಭಿವೃದ್ದಿ ಮಾಡುವ ಮೊದಲು ನಗರಾಭಿವೃದ್ದಿ ಪ್ರಾಧಿಕಾರ ಭೂ ಪರಿವರ್ತನೆ ಕೆರೆ ರಾಜಕಾಲುವೆಗಳ ಬೋಪರ್ ಜೋನ್, ರಸ್ತೆಗಳು, ಉದ್ಯಾನವನ, ಸಿ.ಎ. ನಿವೇಶನ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕ, ಮತ್ತಿತರ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ಬಡವಾಣೆಯ ಮಾಲೀಕರ ಕರ್ತವ್ಯ. ಆದರೆ ಬಡ ಕೂಲಿ ಕಾರ್ಮಿಕರ ಅಮಾಯಕತನವನ್ನೇ ಬಂಡವಾಳವಾಗಿಸಿಕೊoಡು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕೈಕಟ್ಟಿ ಕೊಂಡು ಸರ್ಕಾರಿ ಆಸ್ತಿಗಳಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಆ ದಾಖಲೆಗಳನ್ನು ಪಂಚಾಯಿತಿ ಅಧಿಕಾರಿಗಳಿಗೆ ನೀಡಿ ಪ್ರತಿ ಖಾತೆಗೆ 20 ರಿಂದ 30 ಸಾವಿರ ಲಂಚ ಪಡೆದು ಸಾವಿರಾರು ಅಕ್ರಮ ಖಾತೆಗಳನ್ನು ಅನಧಿಕೃತ ಬಡಾವಣೆಗಳಿಗೆ ಸೃಷ್ಟಿಸಿಕೊಂಡು ಈ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಬಡವರು ದುಡಿದ ಹಣವನ್ನು ಲೇಔಟ್ಗಳಲ್ಲಿನ ಸೈಟುಗಳ ಮೇಲೆ ಸುಳಿದು ಕಡೆಗೆ ನಿವೇಶನವು ಇಲ್ಲ, ಹಣವೂ ಇಲ್ಲವೆ. ಗೋಳಾಡುವ ಪರಿಸ್ತಿತಿಗೆ ಪಂಚಾಯ್ತಿ ಅಧಿಕಾರಿಗಳು ಬಡವರನ್ನು ತಂದು ನಿಲ್ಲಿಸಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಗಡಿಭಾಗದ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ಕೋಟಿ ಕೋಟಿ ಹಣವನ್ನು ಕಾಮಗಾರಿಗಳು ಮಾಡದೆ ಲೂಟಿ ಮಾಡುತ್ತಿದ್ದಾರೆ. ಕೇಳಿದರೆ ದೌರ್ಜನ್ಯ ಮಾಡುತ್ತಾರೆಂದು ದೂರು ನೀಡಿದರು.
ಒಂದು ಕೊಡೆ ಅಕ್ರಮ ಖಾತೆಗಳ ದಂದೆ ಮತ್ತೊಂದುಕಡೆ ಗ್ರಾಮೀಣ ಭಾಗದ ಬಡವರ ಜೀವನ ಹಾಗೂ ಆಹಾರ ಭದ್ರತೆ ದೃಷ್ಟಿಯಿಂದ ಜಾರಿಗೆ ತಂದಿರುವ ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಬಡ ಕೂಲಿ ಕಾರ್ಮಿಕರ ಜಾಬ್ಕಾರ್ಡ್ ಹೆಸರಿನಲ್ಲಿ ಉದ್ಯೋಗ ನೀಡುತ್ತೇವೆಂದು ನರೇಗಾ ಕಾಮಗಾರಿಗಳನ್ನು ದುಡಿಯುವ ಕೈಗೆ ಕೆಲಸ ನೀಡದೆ ಜೆ.ಸಿ.ಬಿಗಳ ಮುಖಾಂತರ ಮಾಡಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲೂಟಿ ಮಾಡಿ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತಿದ್ದಾರೆಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಸಾವಿರಾರು ಕೋಟಿ ಹಣ ಪಂಚಾಯ್ತಿಗಳಿಗೆ ನರೇಗಾ ಕಾಮಗಾರಿಗಳಿಗೆ ಬಿಡುಗಡೆಯಾಗುತ್ತಿದೆ. ಆದರೆ ಯಾವ ಹಳ್ಳಿಯಲ್ಲೂ ಸಮರ್ಪಕವಾದ ರಸ್ತೆಯಿಲ್ಲ. ಬೀದಿ ದೀಪವಿಲ್ಲ. ಚರಂಡಿ ಸ್ವಚ್ಚತೆ ಇಲ್ಲ. ಒಟ್ಟಾರೆಯಾಗಿ ಹಳ್ಳಿ ಜನರಿಗೆ ಅನಾರೋಗ್ಯ ಭಾಗ್ಯ ಕೊಟ್ಟು ಅಧಿಕಾರಿಗಳ ಜೇಬಿಗೆ ಕೋಟಿ ಕೋಟಿ ಹಣ ಸೇರುವ ದಂದೆಗೆ ಕಡಿವಾಣ ಇಲ್ಲದಂತಾಗಿದೆ. ಕಾಮಗಾರಿ ಬಡವರ ಕೈಗೆ ಸಿಗಬೇಕಾದರೆ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಗೂ ಬೆಳಿಗ್ಗೆ ಸಂಜೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಪೋಟೋ ತೆಗೆದು ಸಂಬoಧಪಟ್ಟ ಅಧಿಕಾರಿಗಳಿಗೆ ವಾಟ್ಸಾಪ್ ಮಾಡುವ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದರು.
48 ಗಂಟೆಯ ವರೆಗೆ ಸಮಸ್ಯೆಯನ್ನು ಬಗೆ ಹರಿಸಿದೇ ಇದ್ದರೆ ಮಾನ್ಯ ಮುಖ್ಯ ಮಂತ್ರಿಗಳಿಗೆ ನ-10 ರಂದು ದೂರು ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳಾದ ರವಿಕುಮಾರ್ ಅಕ್ರಮ ಖಾತೆಗಳು ಪಂಚಾಯಿತಿಗಳಲ್ಲಿ ನಡೆದಿರುವುದು ನಿಜ. ಕೂಡಲೇ ಸಂಬoಧಪಟ್ಟ ಎಲ್ಲಾ ಲೇಔಟ್ಗಳ ವರದಿಯನ್ನು ತರಿಸಿಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತ ಸಂಘದ ತಾ.ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ಬಾಬಾಜಾನ್, ಮುನಿಯಪ್ಪ, ರಾಮಸಾಗರ ವೇಣು, ಸುರೇಶ್ಬಾಬು, ಪಾರಂಡಹಳ್ಳಿ ಮಂಜುನಾಥ, ವೆಂಕಟರಾಮಣ್ಣ, ಭಾವರಹಳ್ಳಿ ಕೃಷ್ಣಪ್ಪ, ಕಾರಹಳ್ಳಿ ಮಂಜುನಾಥ, ನಾಗಭೂಷಣ್. ಮಾಲ್ಲೂಕು ತಾ.ಆದ್ಯಕ್ಷ ಯಲ್ಲಣ್ಣ, ಹರೀಶ್, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಇದ್ದರು.
ವರದಿ: ವಿಷ್ಣು ಕೋಲಾರ