ನ್ಯೂಸ್ಶಿವಮೊಗ್ಗ

ಗುರು ವೀರ ಮಡಿವಾಳ ಮಾಚಯ್ಯ ಸಂಘದ 11ನೇ ವಾರ್ಷಿಕೋತ್ಸವ ಫೆಬ್ರವರಿ 3 ಮತ್ತು 4ರಂದು

ಗುರು ವೀರ ಮಡಿವಾಳ ಮಾಚಯ್ಯ ಸಂಘದ 11ನೇ ವಾರ್ಷಿಕೋತ್ಸವ ಫೆಬ್ರವರಿ 3 ಮತ್ತು 4ರಂದು

(SHIVAMOGA): ಸಾಗರ ಶ್ರೀ ಗುರು ವೀರ ಮಡಿವಾಳ ಮಾಚಯ್ಯ ಸಂಘದ 11ನೇ ವಾರ್ಷಿಕೋತ್ಸವ ಫೆಬ್ರವರಿ 3 ಮತ್ತು 4ರಂದು ನಗರದ ಸುಭಾಷ್ ನಗರದಲ್ಲಿರುವ ಸಂಘದ ಕಟ್ಟಡದಲ್ಲಿ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಎಂಎಸ್ ಕೊಟ್ರಪ್ಪ ತಿಳಿಸಿದ್ದಾರೆ.


ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರಂದು ಮಕ್ಕಳು ಮತ್ತು ಮಹಿಳೆಯರ ಆಟೋ ಸ್ಪರ್ಧೆ ನಡೆಯಲಿದೆ ಇದರ ಉದ್ಘಾಟನೆಯನ್ನು ಸಾಗರ ಟೌನ್ ಹೌಸಿಂಗ್ ಬೋರ್ಡ್ ಸೊಸೈಟಿ ನಿರ್ದೇಶಕ ಕೆ ವಿಘ್ನೇಶ್ವರ ಮಾಡಲಿದ್ದಾರೆ ಫೆಬ್ರವರಿ ಮೂರರಂದು ಸೋಮವಾರ ಸಂಜೆ 5:30ಕ್ಕೆ ಶ್ರೀ ಗುರು ವೀರ ಮಡಿವಾಳ ಮಾಚಯ್ಯ ದೇವರ ರಾಜಭೀದಿ ಉತ್ಸವವು ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಿ ಮಡಿವಾಳ ಮಾಚಯ್ಯ ದೇವಸ್ಥಾನದವರೆಗೆ ನಡೆಯಲಿದೆ ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯಗಳ ಕಲಾತಂಡಗಳು ಭಾಗವಹಿಸಿ ಮೆರಗು ನೀಡಲಿವೆ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಶ್ರೀ ಮಾಚಯ್ಯ ದೇವರಿಗೆ ಅಭಿಷೇಕ ಗಣ ಹೋಮ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕಾರ್ಯಗಳು ಪ್ರಾರಂಭವಾಗಲಿವೆ. ಮಧ್ಯಾಹ್ನ 12:30 ರಿಂದ ಸಾರ್ವತ್ರಿಕ ಅನ್ನಸಂತರ್ಪಣೆ ಇರಲಿದೆ ಸಂಜೆ 5:30 ರಿಂದ ಶ್ರೀ ಗುರು ವೀರ ಮಡಿವಾಳ ಮಾಚಯ್ಯ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಿಳಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಇರಲಿದೆ. 


ಅಂದು ಸಂಜೆ 7:30 ರಿಂದ ನಡೆಯುವ ವೇದಿಕೆ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಲೂರು ಉದ್ಘಾಟಿಸಲಿದ್ದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಂಎಸ್ ಕೊಟ್ರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಸಂಸದ ಬಿ ವೈ ರಾಘವೇಂದ್ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ,  ತಾಲೂಕು ಮಡಿವಾಳ ಸಂಘದ ಗೌರವಾಧ್ಯಕ್ಷ ಶಿವಮೂರ್ತಿ, ನಗರಸಭೆ ಸದಸ್ಯ ತುಕಾರಾಂ, ಮೈತ್ರಿ ಪಾಟೀಲ್, ಪ್ರಮುಖರಾದ ವಾಸಂತಿ ರಮೇಶ್ , ಲಕ್ಷ್ಮೀ ರಾಜು, ದೇವೇಂದ್ರಪ್ಪ, ಸುನಿಲ್ ಕುಮಾರ್, ಕೆ ದಿವಾಕರ್,  ಕಾರ್ಯದರ್ಶಿ ವೆಂಕಟೇಶ್ ಬಿಳಿಸಿರಿ ಸೇರಿದಂತೆ ಕಾರ್ಯಕಾರಿ ಮಂಡಳಿ ಹಾಗೂ ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ತಾಲೂಕಿನ ಸಮಾಜ ಬಾಂಧವರು ಹಾಜರಿರಲಿದ್ದಾರೆ ಇದೇ ವೇದಿಕೆಯಲ್ಲಿ ಸಮಾಜದ ಸಾಧಕರಾದ ಶಿರಾಳಕೊಪ್ಪ ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಎನ್ ಡೊಳ್ಳೆ ಯೋಗಪಟು ಉತ್ಸವ ಎಸ್ ೊಳ್ಳು ಕುಣಿತ ಕಲಾವಿದರಾದ ಆಕಾಶ್ ಎಂ ಕೆ ಚಂದ್ರು ಚಿತ್ರಕಲೆಗೆ ಕೃಷ್ಣಮೂರ್ತಿ ತಂಗಾಳಿ ತಾಳಗುಪ್ಪ ಚೆಸ್ ಕ್ರೀಡಾಪಟು. ರಕ್ಷಿತ್ ಜಿ ಕೊಲ್ಲಿಕೊಪ್ಪ ಇವರನ್ನು ಸನ್ಮಾನಿಸಲಾಗುವುದು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಮತ್ತು ಪಿಯುಸಿಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ರಾತ್ರಿ 8.30 ರಿಂದ ಕುಂದಾಪುರದ ಓಂಕಾರ್ ಕಲಾವಿದರು ನಡೆಸಿಕೊಡುವ ವಿನೂತನ ಶೈಲಿಯ ಕುಂದಕನ್ನಡದ ಹಾಸ್ಯಮಯ ನಗೆ ನಾಟಕ ವಾಚ್ ಮ್ಯಾನ್ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಸಮಾಜದ ಭಾಂದವರು ಅತೀ ಹೆಚ್ಚಿ ಸಂಖ್ಯೆ ಅಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code