ಚಿಕ್ಕಮಗಳೂರುನ್ಯೂಸ್

14ರಿಂದ ಶ್ರೀ ಸಿದ್ದೇಶ್ವರ ಸ್ವಾಮಿ ಶ್ರೀ ಅಜ್ಜಯ್ಯ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಸ್ವಾಮಿ ಜಾತ್ರಾ ಮಹೋತ್ಸವ.

14ರಿಂದ ಶ್ರೀ ಸಿದ್ದೇಶ್ವರ ಸ್ವಾಮಿ ಶ್ರೀ ಅಜ್ಜಯ್ಯ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಸ್ವಾಮಿ ಜಾತ್ರಾ ಮಹೋತ್ಸವ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು: ಖಂಡ್ಯಾ ಹೋಬಳಿ ಬಿದರೆ ಬ್ಯಾಡಿಗೆರೆ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಶ್ರೀ ಅಜ್ಜಯ್ಯ ಸ್ವಾಮಿ ಅನ್ನಪೂರ್ಣೇಶ್ವರಿ ಅಮ್ಮನ್ನವರ ಪ್ರತಿವರ್ಷದಂತೆ ಈ ವರ್ಷವೂ ಕೂಡ 14-03-2024ರಿಂದ 16-03-2024ವರೆಗೆ ನಡೆಯಲಿದೆ.

14ರಂದು ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು 15ರಂದು ಕೆಂಡಾರ್ಚನೆ ಸಂಜೆ ದೇವಸ್ಥಾನದಿಂದ ಉತ್ಸವ ಹೊರಟು ರಾತ್ರಿ ನೀರ್ಕಟ್ಟಾಕನ್ ಹರದಲ್ಲಿ ರಾತ್ರಿಪೂರ್ತಿ ಹಡ್ದೆ ಉತ್ಸವದ ಜೊತೆ ಸುಗ್ಗಿಕುಣಿತ 16ರಂದು ಕೆಂಡದ ಗದ್ದೆಯಲ್ಲಿ ಕೆಂಡಾರ್ಚನೆ ಸ್ವಾಮಿ ಉತ್ಸವ ಹಣ್ಣು-ಕಾಯಿ ಪ್ರದಕ್ಷಿಣೆ ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪರಣೆ 17ರಂದು ಗಿರಿ ಹತ್ತುವುದು 101ಕೋಟಿ ದೇವಗಣಗಳಿಗೆ ಪೂಜೆ ಸಲ್ಲಿಕೆ ಕಳಸ ಪೂಜೆ.

ಜಾತ್ರಾ ಉತ್ಸವ ಮುಕ್ತಯ 26-03-2024ರಂದು 9ದಿನದ ಪೂಜೆ ಶ್ರೀ ಚೌಡೇಶ್ವರಿ ದೇವಿಗೆ ಹರಕೆ ಸಲ್ಲಿಸುವುದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

Scan the code