1700 ನೇ ಮದ್ಯವರ್ಜನ ಶಿಬಿರದ ದ್ವಿತೀಯ ಮಾಸಿಕ ಸಭೆಮದ್ಯವರ್ಜನ ಶಿಬಿರದ ದ್ವಿತೀಯ ಮಾಸಿಕ ಸಭೆ
(UDUPI): ಉಡುಪಿ ಪ್ರಾದೇಶಿಕ ವಿಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದ 1700ನೇ ಮದ್ಯವರ್ಜನ ಶಿಬಿರದ ದ್ವಿತೀಯ ಮಾಸಿಕ ಸಭೆಯನ್ನು ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಮಹೇಶ್ ಕೆ ಸವಣೂರು ಅವರು ಉದ್ಘಾಟಿಸಿದರು. ಜನ ಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಯೋಜನಾ ಅಧಿಕಾರಿ ಗಣೇಶ ಆಚಾರ್ಯ, ವ್ಯವಸ್ಥಾನ ಸಮಿತಿ ಉಪಾಧ್ಯಕ್ಷರಾದ ವೇಣುಗೋಪಾಲ ಕಳುವಾಜೆ, ಗಣೇಶ್ ಉದನಡ್ಕ, ಗೌರವ ಸಲಹೆಗಾರ ಲಕ್ಮಣ ಗೌಡ ಮುಗರಂಜ ಕಾಣಿಯೂರು ಒಕ್ಕೂಟದ ಅಧ್ಯಕ್ಷ ಕುಸುಮಧರ ಅನಿಲ ,ಯೋಜನಾಧಿಕಾರಿ ಮೇದಪ್ಪ ನಾವೂರು ,ವಲಯ ಮೇಲ್ವಿಚಾರಕರಾದ ಹರ್ಷ ಕುಮಾರಿ ಮೊದಲಾದ ವರು ಉಪಸ್ಥಿತರಿದ್ದರು. ಶೇಕಡ 93 ಜನ ಸಂಪೂರ್ಣ ಪಾನಮುಕ್ತರಾಗಿ ತಮ್ಮ ಕುಟುಂಬಸ್ಥರ ಜೊತೆ ಸಂಪೂರ್ಣ ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ನವಜೀವನ ಪೋಷಕರು ಉಪಸ್ಥಿತರಿದ್ದರು