ನ್ಯೂಸ್ರಾಜ್ಯ

ಸಪ್ಟೆಂಬರ್ 17ನೇ ತಾರೀಖಿನಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಾಗುತ್ತದೆ

ಸಪ್ಟೆಂಬರ್ 17ನೇ ತಾರೀಖಿನಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಾಗುತ್ತದೆ

(ರಾಯಚೂರು-17- ಸೆ): ರಾಯಚೂರಿನಲ್ಲಿ ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು ಶ್ರೀ ಶ್ರೀ ಶ್ರೀ ಮಾದರ ಚೆನ್ನಯ್ಯ ಭವನದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಆಚರಿಸಲಾಯಿತು ಒಂದು ಕಾಲಘಟ್ಟದಲ್ಲಿ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಇವರ ಸಾರಥ್ಯದಲ್ಲಿ ಹೈದರಾಬಾದ್ ಕರ್ನಾಟಕ ಸ್ವಾತಂತ್ರವನ್ನು ನೀಡಲಾಯಿತು ಇಂದು ಕಲ್ಯಾಣ ಕರ್ನಾಟಕ ಎಂದು ನಾಮಕರಣಗೊಂಡಿದೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರ್, ಕೊಪ್ಪಳ, ಬಳ್ಳಾರಿ, ವಿಜಯನಗರ, ಸ್ಥಾನಮಾನವನ್ನು ನೀಡಲಾಯಿತು ಹೀಗಾಗಿ ಸಪ್ಟೆಂಬರ್ 17ನೇ ತಾರೀಖಿನಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಾಗುತ್ತದೆ

Advertisement

ಹೈದರಾಬಾದ್ ಕರ್ನಾಟಕ ವಿಮೋಚನೆ ದಿನಾಚರಣೆ ಆದಿ ಜಾಂಬವ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷರಾದ ರಾಮಣ್ಣ ಉಪಾಧ್ಯಕ್ಷರಾದ ವೆಂಕಟೇಶ್ ಕಾರ್ಯದರ್ಶಿ ಬಸವರಾಜತ್ತಿನೂರ ಧ್ವಜಾರೋಹಣ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೆಡೆಯಿತು. ಹೈದರಾಬಾದ್ ನಿಜಾಮನಿಂದ ತುಳಿತಕ್ಕೆ ಒಳಗಾಗಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಈ ಜಿಲ್ಲೆಗಳು ಸೆಪ್ಟಂಬರ್ 17ರಂದು ಸ್ವಾತಂತ್ರಗೊಂಡಿದೆ ಎಂದು ಅಧ್ಯಕ್ಷರಾದ ರಾಮಣ್ಣನವರು ಹೇಳಿದರು. ಕಾರ್ಯದರ್ಶಿಗಳು ನಾವು ಇಂದು ಸ್ವಾತಂತ್ರ್ಯಗೊಂಡ ದಿನ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಈ ಒಂದು ಪ್ರಾಂತ್ಯವನ್ನು ನಿಜಾಮರಿಂದ ಮುಕ್ತಿಗೊಳಿಸಿದರು ಎಂದು ಕಾರ್ಯದರ್ಶಿ ವೆಂಕಟೇಶ್ ಅವರು ತಿಳಸಿದರು. ಹಿಂದುಳಿದಿರುವ ಪ್ರದೇಶವಾದ ಕಾರಣ ಇದು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಗಾಗಿತ್ತು.

1947 ರಲ್ಲಿ ಸ್ವಾತಂತ್ರ ಬಂದರೂ ಕೂಡ ಈ ಪ್ರದೇಶಗಳಿಗೆ ಸ್ವಾತಂತ್ರವಿರಲಿಲ್ಲ ಬ್ರಿಟಿಷರು ಈ ಪ್ರಾಂತಗಳನ್ನ ಯಾರಾದರೂ ಬೇಕಾದರೂ ಹಾಳಬಹುದು ಎಂದು ಘೋಷಿಸಿದ್ದರು. ನಿಜಾಮರಿಂದ ಮುಕ್ತಿ ಸಿಕ್ಕ ದಿನವೆಂದು ಸಪ್ಟಂಬರ್ 17 ನೇ ತಾರೀಕು ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ಬಸವರಾಜ್ ಅವರು ತಿಳಿಪಡಿಸಿದರು ಕಾರ್ಯಕ್ರಮದಲ್ಲಿ ಸಾಕಷ್ಟು ರೀತಿಯ ಬೆಳವಣಿಗೆಗಳು ಕಲ್ಯಾಣ ಕರ್ನಾಟಕಕ್ಕೆ ಬೇಕಾಗಿದೆ ಎಂದು ಮಲ್ಲಿಕಾರ್ಜುನ ಅವರು ತಿಳಿಪಡಿಸಿದರು.

ವರದಿ:- ಸುನಿಲ್ ಕುಮಾರ್ ಹಂಪಪಟ್ಟಣ

Leave a Reply

Your email address will not be published. Required fields are marked *

Scan the code