ಜಿಲ್ಲೆನ್ಯೂಸ್

ದತ್ತ ಪೀಠದಲ್ಲಿ ಗೋರಿ ದ್ವಂಸ ಮಾಡಿದ 2017ರ ಕೇಸ್ ರಿ ಓಪನ್.

ದತ್ತ ಪೀಠದಲ್ಲಿ ಗೋರಿ ದ್ವಂಸ ಮಾಡಿದ 2017ರ ಕೇಸ್ ರಿ ಓಪನ್.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಗಿರಿಧಾಮದಲ್ಲಿರುವ ದತ್ತ ಪೀಠದಲ್ಲಿದ್ದ ಗೋರಿಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರವು ಮತ್ತೆ ರಿ ಓಪನ್ ಮಾಡಲಾಗಿದೆ.

2017ರ ಡಿಸೆಂಬರ್ 3 ರಂದು ದತ್ತಜಯಂತಿ ದಿನ ದರ್ಗಾದ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಆರೋಪವಿದೆ. ಆ ಪ್ರಕರಣವನ್ನು ಮತ್ತೆ ರಾಜ್ಯ ಸರ್ಕಾರ ಮರು ಜೀವ ನೀಡಿದೆ. 7 ವರ್ಷದ ಬಳಿಕ ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿಸಿದೆ. ಗಮನಾರ್ಹವೆಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕೇಸ್ ಕ್ಲೋಸ್ ಆಗಿತ್ತು.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 143,447,427, 298,504,506,114,353, ಕೇಸ್ ದಾಖಲಾಗಿತ್ತು.

ಭಜರಂಗದಳದ ಒಟ್ಟು 14 ಕಾರ್ಯಕರ್ತರ ಮೇಲೆ ಈ ಪ್ರಕರಣ ದಾಖಲಾಗಿದ್ದು, ತುಡುಕೂರು ಮಂಜು, ಮೋಹನ್, ಶಿವರಾಜ್, ಸಂದೇಶ್, ಸುಮಂತ್, ಮಹೇಂದ್ರ, ನಾಗ, ನಾಗೇಂದ್ರ ಪೂಜಾರಿ, ಅಶೋಕ್, ತೇಜು, ರಾಮು, ಶ್ರೀನಾಥ್, ಲೋಕೇಶ್, ಸಂದೀಪ್, ಅವರು ಆರೋಪಿಗಳಾಗಿದ್ದಾರೆ.

14 ಜನರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

Scan the code