ದತ್ತ ಪೀಠದಲ್ಲಿ ಗೋರಿ ದ್ವಂಸ ಮಾಡಿದ 2017ರ ಕೇಸ್ ರಿ ಓಪನ್.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಗಿರಿಧಾಮದಲ್ಲಿರುವ ದತ್ತ ಪೀಠದಲ್ಲಿದ್ದ ಗೋರಿಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರವು ಮತ್ತೆ ರಿ ಓಪನ್ ಮಾಡಲಾಗಿದೆ.
2017ರ ಡಿಸೆಂಬರ್ 3 ರಂದು ದತ್ತಜಯಂತಿ ದಿನ ದರ್ಗಾದ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಆರೋಪವಿದೆ. ಆ ಪ್ರಕರಣವನ್ನು ಮತ್ತೆ ರಾಜ್ಯ ಸರ್ಕಾರ ಮರು ಜೀವ ನೀಡಿದೆ. 7 ವರ್ಷದ ಬಳಿಕ ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿಸಿದೆ. ಗಮನಾರ್ಹವೆಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕೇಸ್ ಕ್ಲೋಸ್ ಆಗಿತ್ತು.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 143,447,427, 298,504,506,114,353, ಕೇಸ್ ದಾಖಲಾಗಿತ್ತು.
ಭಜರಂಗದಳದ ಒಟ್ಟು 14 ಕಾರ್ಯಕರ್ತರ ಮೇಲೆ ಈ ಪ್ರಕರಣ ದಾಖಲಾಗಿದ್ದು, ತುಡುಕೂರು ಮಂಜು, ಮೋಹನ್, ಶಿವರಾಜ್, ಸಂದೇಶ್, ಸುಮಂತ್, ಮಹೇಂದ್ರ, ನಾಗ, ನಾಗೇಂದ್ರ ಪೂಜಾರಿ, ಅಶೋಕ್, ತೇಜು, ರಾಮು, ಶ್ರೀನಾಥ್, ಲೋಕೇಶ್, ಸಂದೀಪ್, ಅವರು ಆರೋಪಿಗಳಾಗಿದ್ದಾರೆ.
14 ಜನರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.