ಬಲಮಂದೆ ಗ್ರಾಮದಲ್ಲಿ 27ನೇ ವರ್ಷದ ಉರುಸ್ ಅದ್ದೂರಿಯಿಂದ ಆಚರಣೆ
(KOLARA): ಬಂಗಾರಪೇಟೆ: ಮುಸ್ಲಿಂ ಧಾರ್ಮಿಕ ಉತ್ಸವಗಳಲ್ಲಿ ಉರುಸ್ ಅತ್ಯಂತ ಪ್ರಮುಖವಾದುದು ಈ ಹಿನ್ನಲೆಯಲ್ಲಿ ಬಲಮಂದೆ ಗ್ರಾಮದಲ್ಲಿ ಸತತ 27 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ ,ಈ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಭೇದಭಾವವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ ಎಂದು ಬಲಮಂದೆ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಶೆಟ್ಟಿ ತಿಳಿಸಿದರು.
ತಾಲೂಕಿನ ಬಲಮಂದೆ ಗ್ರಾಮದ “ಶೆಹನ್ ಷಾ ಆಸ್ಥಾನ” ಮಸೀದಿಯಲ್ಲಿ ಟ್ರಸ್ಟ್ ವತಿಯಿಂದ 27 ನೇ ವರ್ಷದ ಉರ್ಸ್ ಆಚರಣೆ ಹಾಗೂ ಸಂದಲ್ ಶರೀಫ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು,ದರ್ಗಾದ ಆವರಣದಲ್ಲಿ ದೆಹಲಿ ಹಾಗೂ ಕೊಲ್ಲಾಪುರದ ತಂಡದವರ ಕವಾಲಿ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ,ಉರುಸ್ ಕಾರ್ಯಕ್ರಮ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಕಳೆದ 27ವರ್ಷಗಳಿಂದ ಎಲ್ಲಾ ಧಾರ್ಮಿಕರು ಸೇರಿ ಆಚರಣೆ ಮಾಡುವ ಉರುಸ್ ತಾಲೂಕಿನಲ್ಲಿ ಒಂದು ವಿಶಿಷ್ಟ ಸ್ಥಾನ ಮಾನವಿದೆ.ಈ ಉರುಸ್ ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯರಿಗೂ ಪಾಲ್ಗೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾಮಸಮುದ್ರದ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಮಾತನಾಡಿ, ಉರ್ಸ್ ಕಾರ್ಯಕ್ರಮ ಸಾಮರಸ್ಯ ಬೇಸುಗೆಗೆ ಕಾರಣವಾಗಿದೆ, ಹಿಂದೂಗಳ ಸಹಯೋಗದಲ್ಲಿ ಸ್ನೇಹ ಪೂರ್ವಕವಾಗಿ ಉರ್ಸ್ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಸಂತಸ ವಿಷಯವಾಗಿದೆ ಎಂದರು .
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಸೈಯದ್ ನವಾಜ್, ಕಾರ್ಯದರ್ಶಿ ಸೈಯಾದ್ ನಯಾಜ್, ಖಾದರ್, ಭಾಷೆ, ಗೌಸ್, ಯಾರಬ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ