ಕೋಲಾರನ್ಯೂಸ್

ಪಟ್ಟಣದ ಮುನಿಯಮ್ಮ ಲೇಔಟ್ ನಲ್ಲಿ 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

ಪಟ್ಟಣದ ಮುನಿಯಮ್ಮ ಲೇಔಟ್ ನಲ್ಲಿ 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

(KOLARA): ಬಂಗಾರಪೇಟೆ : ಪಟ್ಟಣದ ಮುನಿಯಮ್ಮ ಲೇಔಟ್ ನಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ನಡೆಯುವ ಗಣೇಶೋತ್ಸವ ಆಚರಣೆ ತಾಲೂಕಿಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.ಪಟ್ಟಣದಲ್ಲಿ ಗಣೇಶೋತ್ಸವವು ಇಂದು ಕೇವಲ ಒಂದು ವರ್ಗ ಅಥವಾ ಸಮುದಾಯದ ಹಬ್ಬವಾಗದೆ, ಊರ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಸುಮಾರು 15ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಗಣೇಶ ಚತುರ್ಥಿಯ ದಿನವಾದ ಸೆ.7 ರಿಂದ ಸೆ.11ರವರೆಗೆ ಶ್ರದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿ ಪ್ರತಿದಿನ ಅನ್ನದಾನವನ್ನು ಸಹ ಏರ್ಪಡಿಸಲಾಗಿತ್ತು.

ಗಣೇಶ ಹಬ್ಬದ ದಿನದಿಂದಲೂ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.ಇಂದು ಅಂತಿಮ ದಿನವಾದ ಹಿನ್ನೆಲೆ,ವೀಣಾ ವೆಂಕಟೇಶ್ ನೇತೃತ್ವದಲ್ಲಿ ಆ ಭಾಗದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಮ್ಯೂಸಿಕಲ್ ಚೇರ್ ಹಾಗೂ ಮಡಿಕೆ ಹೊಡೆಯುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಹಾಗೂ ಯುವಕರಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.

ಈ ವೇಳೆ ವೀಣಾ ವೆಂಕಟೇಶ್ ಮಾತನಾಡಿ, ಪ್ರತಿವರ್ಷ ನಾವು ಗಣೇಶ ಹಬ್ಬವನ್ನು ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಬಹಳ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಆ ಭಗವಂತ ಪ್ರತಿವರ್ಷ ಮಳೆ,ಬೆಳೆ ಹಾಗೂ ಎಲ್ಲರಿಗೂ ಆರೋಗ್ಯವನ್ನು ನೀಡಲಿ ಎಂದರು.ಇಂದು ಕಡೆ ದಿನ ಆದ ಹಿನ್ನೆಲೆ ಈ ವರ್ಷ ವಿಶೇಷವಾಗಿ ಈ ಭಾಗದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಮ್ಯೂಸಿಕಲ್ ಚೇರ್, ಯುವಕರಿಗೆ ಮಡಿಕೆ ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಿದ್ದೆವು, ಈ ಸ್ಪರ್ಧೆಗಳಲ್ಲಿ ವಿಜೇತರಾದ ಮೂರು ಜನಕ್ಕೆ ಮೂರು ಬಹುಮಾನ ವಿತರಣೆ ಮಾಡಿದ್ದೇವೆ. ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಸಮಾಧಾನಕರ ಬಹುಮಾನವನ್ನು ನೀಡಿದ್ದೇವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ನಂಜೇವಾಡೆಯರ್, ವೀಣಾ ವೆಂಕಟೇಶ್, ಅಂಜನ್, ಶಿವಕುಮಾರ್, ಜೀವನ್ ಬಾಬು, ಸಂತೋಷ್, ವಿಜಯ್ ಕುಮಾರ್, ಸೆಲ್ವಂ, ಪ್ರಸಾದ್ ಹಾಗೂ ಮುನಿಯಮ್ಮ ಬಡಾವಣೆಯ ಎಲ್ಲ ಯುವಕರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code