ಸಿಬ್ಬಂದಿಗಳಿಗೆ 3 ತಿಂಗಳ ವೇತನ ಬಾಕಿ, ಬೇಡಿಕೆ ಈಡೇರದಿದ್ದರೆ ಮುಷ್ಕರ ಕೈಗೊಳ್ಳುತ್ತೆವೆ…!
(VIJAYANAGARA): 108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 3 ತಿಂಗಳ ವೇತನ ಪಾವತಿಯಾಗದೇ ಸಾಕಷ್ಟು ತೊಂದರೆಯಾಗಿರುತ್ತದೆ. ಇದೇ ರೀತಿ ಸುಮಾರು 4 ರಿಂದ 5 ವರ್ಷದಿಂದಲೂ ಸಹ ವೇತನ ವಿಚಾರವಾಗಿ 108 ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಾ ಇದ್ದಾರೆ. ಸರ್ಕಾರ ಮತ್ತು ಜೆ.ವಿ.ಕೆ. ಸಂಸ್ಥೆಯ ಒಡಂಬಡಿಕೆಯ ಪ್ರಕಾರ ವಾರ್ಷಿಕ ವೇತನ ಹೆಚ್ಚಳ ಆಗಬೇಕಾಗಿದ್ದು, 2023 ರ ಶೇಕಡಾ 15% ವೇತನ ಪರಿಷ್ಕರಣೆಯೂ ಸಹ ಆಗಿರುವುದಿಲ್ಲ. ಹಾಗೇ ಇತ್ತೀಚಿನ ದಿನಗಳಲ್ಲಿ ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕನಿಷ್ಠ ವೇತನವು ಸಹ ಜಾರಿ ಮಾಡಿ 108 ಸಿಬ್ಬಂದಿಗಳಿಗೆ ವೇತನವನ್ನು ರೂ. 36008/- ಗಳಿಗೆ ವೇತನ ನಿಗದಿ ಮಾಡಿದ್ದು, ಈ ವೇತನವನ್ನು ಸುಮಾರು 6 ತಿಂಗಳುಗಳ ಕಾಲ ನೀಡಿ ತದ ನಂತರ ಏಕಾಏಕಿ 6000/- ಗಳನ್ನು ಕಡಿತ ಮಾಡಿ 30,000/- ರೂ ಗಳನ್ನು ನೀಡಿರುತ್ತಾರೆ. ಮತ್ತೊಮ್ಮೆ ಪ್ರಸ್ತುತ ವೇತನದಲ್ಲಿ ಕಡಿಮೆಯಾಗುವಂತಹ ಮಾಹಿತಿಯು ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಕೇಳಿಬರುತ್ತಿದ್ದು, 108 ಅಂಬ್ಯುಲೆನ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಾಟ್ಸಾಪ್ ಗ್ರೂಪ್ನಲ್ಲಿ ವದಂತಿಯ ಸಂದೇಶಗಳು ಹರಿದಾಡುತ್ತಿರುತ್ತದೆ. ಹಾಗಾಗಿ ಮಾನ್ಯ ಆರೋಗ್ಯ ಸಚಿವರಲ್ಲಿ ಈ ಕೆಳಕಂಡಂತೆ ಬೇಡಿಕೆಯನ್ನು ಇಟ್ಟಿದ್ದಾರೆ.
ಮಾನ್ಯ ಆರೋಗ್ಯ ಸಚಿವರು (ವೇತನಕ್ಕೆ ಸಂಭದಿಸಿದಂತೆ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಾಕಿ ಇರುವ 4 ತಿಂಗಳ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಿಸಿ 108 ಸಿಬ್ಬಂದಿಗಳು ದಿನನಿತ್ಯ ಅನುಭವಿಸುತ್ತಿರುವ ಹಾಗೂ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಸಭಾ ನಡವಳಿಯನ್ನು ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಂಡು ನಮ್ಮ ಸಿಬ್ಬಂದಿಗಳಿಗೆ ಇನ್ನು ಉತ್ತಮ ರೀತಿಯಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೇಂದು ಬೇಡಿಕೆ ಇಟ್ಟಿದ್ದಾರೆ). “ಈ ಸಮಸ್ಯೆಯನು ಮುಂದಿನ 10 ದಿನಗಳೊಳಗಾಗಿ ಸರಿಪಡಿಸಿ ಕೊಡದೇ ಇದ್ದಲ್ಲಿ ನಾವು ಯಾವುದೇ ರೀತಿಯ ಬೇರೆ ದಾರಿ ಕಾಣದೇ ಆಸಹಾಯಕರಾಗಿ ಮುಷ್ಕರ ಕೈಗೊಳ್ಳುತ್ತೇವೆ “ಎಂದು ಎಚ್ಚರಿಗೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಯೇನಾದರು ಸಾರ್ವಜನಿಕ ಸೇವೆಗೆ ಅನಾನುಕೂಲತೆಗಳು ಉಂಟಾದಲ್ಲಿ ನೇರವಾಗಿ ಸಂಬಂಧಿಸಿದ ಸಂಸ್ಥೆಯೇ ಹೊಣೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರು, ಇಂದ್ರಪ್ಪಾ ಗೌರವ ಅಧ್ಯಕ್ಷರು, ದೇವೆಂದ್ರಪ, ಪ್ರದಾನ ಕಾರ್ಯದರ್ಶಿ ಗೋವಿಂದಪ್ಪ, ಮಹಿಳಾ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷರು ರುದ್ರುಸ್ವಾಮಿ, ಖಜಾಂಚಿ, ಶಂಕರನಾಯ್ಕ, ಸಂಘಟನಾ ಕಾರ್ಯದರ್ಶಿ ಕೊಟ್ರೇಶ್ ತಾಲೂಕು ಅಧ್ಯಕ್ಷರು ಕ್ರುಷ್ಣಾನಾಯ್ಕ್ ಈ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.