ಜಿಲ್ಲೆನ್ಯೂಸ್

31 ನೇ ವರ್ಷದ ಅನ್ನದಾನ ಮತ್ತು ಉತ್ಸವ, ಧರ್ಮ ಜಾಗೃತಿ ಸಮಾರಂಭದ ಸೇವಾಕರ್ತರ ಭಿನ್ನಹದ ಆಮಂತ್ರಣ

31 ನೇ ವರ್ಷದ ಅನ್ನದಾನ ಮತ್ತು ಉತ್ಸವ, ಧರ್ಮ ಜಾಗೃತಿ ಸಮಾರಂಭದ ಸೇವಾಕರ್ತರ ಭಿನ್ನಹದ ಆಮಂತ್ರಣ


ಶ್ರೀ ಅಯ್ಯಪ್ಪ ಮಹೋತ್ಸವ ಧರ್ಮ ಜಾಗೃತಿ ದೀಪೋತ್ಸವ ಅನ್ನದಾನ ಕಾರ್ಯಕ್ರಮ.
(CHIKKAMAGALURU): ಬಾಳೆಹೊನ್ನೂರಿನ ರೇಣುಕನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದ ಅವರಣದಲ್ಲಿ ಶ್ರೀ ಎ.ಕೆ.ಪಿ. ಕೃಷ್ಣಪುದುವಾನ್ ಗುರುಸ್ವಾಮಿಯವರ ನೇತೃತ್ವದಲ್ಲಿ ಅದ್ದೂರಿಯಾದ ಶ್ರೀ ಅಯ್ಯಪ್ಪಸ್ವಾಮಿಯವರ ಉತ್ಸವ, ದೀಪೋತ್ಸವ, ಹಾಗೂ ಮಹಾ ನನ್ನಧಾನ ಕಾರ್ಯಕ್ರಮಗಳು 01-01-2024ರಂದು ನೆಡೆಯಲಿದೆ. ಪ್ರತಿನಿತ್ಯ ಸ್ವಾಮಿಯ ಸನ್ನಿಧಾನದಲ್ಲಿ ಪೂಜಾ ಕಾರ್ಯಗಳು ನಡೆಯುತಿದ್ದು ಪೂಜೆ ಮಾಡಿಸುವಂತ ಭಕ್ತಾಭಿಮಾನಿಗಳು ಗುರುಸ್ವಾಮಿಯವರನ್ನು ಸಂಪರ್ಕಿಸಬಹುದಾಗಿದೆ.



ಪ್ರತೀವರ್ಷದಂತೆ ಈ ಬಾರಿ ನಮ್ಮ ನಿಮ್ಮೆಲ್ಲರನ್ನು ಹರಸಿ ಸುಧಾಶೀರ್ವಾದ ಸಂದೇಶ ನೀಡಿ ಹರಸಲು ಆದೂರಿನ ಶ್ರೀ ರಂಭಾಪುರೀ ರಾಖಾಮಠದ ಪರಮಪೂಜ್ಯ ಶ್ರೀ ಷ|| ಬ್ರ|| ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರು ಮತ್ತು ನಮ್ಮ ಸಮಿತಿಯಿಂದ ಪ್ರತೀವರ್ಷ ನೀಡಲಾಗುತ್ತಿರುವ “ಶ್ರೀ ಅಯ್ಯಪ್ಪಸ್ವಾಮಿ ಕಲಾ ಸೇವಾ ರತ್ನ” ಪ್ರಶಸ್ತಿಯನ್ನು ಸ್ವೀಕರಿಸಲು ನಮ್ಮ ಜಿಲ್ಲೆಯ ಹೆಮ್ಮೆಯ ರಂಗಕರ್ಮಿ. ಚಲನಚಿತ್ರ ನಿರ್ದೇಶಕ, ಶ್ರೀ ಎಸ್.ವಿ ರಮೇಶ್ ಬೇಗಾರ್ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಗೌರವ ಗುರುರಕ್ಷೆ ಪಡೆಯಲು ಚಲನಚಿತ್ರ ನಾಯಕ ನಟಿ ನಮ್ಮ ಮಲೆನಾಡಿನವರ ಆದ ಕು।। ಎಸ್.ಆರ್ ನಾಗಶ್ರೀ ಬೇಗಾರ್ ರವರು ನಮ್ಮೊಂದಿಗೆ ಪಾಲ್ಗೊಳ್ಳಲಿದ್ದಾರೆ. ತಿಳಿಸಲು ಹಷಿಸುತ್ತೇವೆ.



ಈ ಕಾರ್ಯಕ್ರಮಗಳು ತಮ್ಮಂತಹ ಭಕ್ತರ, ಸ್ಥಳೀಯರ ಮತ್ತು ಸುತ್ತಮುತ್ತಲ ಎಲ್ಲಾ ಗ್ರಾಮಗಳ ಭಕ್ತಾಧಿಗಳ ಹಾಗೂ ಎಲ್ಲಾ ಅಯ್ಯಪ್ಪ ಮಾಲಾಧಾರಿಗಳ ಭಾಗವಹಿಸುವಿಕೆಯಿಂದ ವರ್ಷದಿಂದ ವರ್ಷಕ್ಕೆ ಪ್ರಸಿದ್ದಿಯನ್ನು ಪಡೆಯುತ್ತಿರುವುದು ತಮಗೆಲ್ಲ ತಿಳಿದ ವಿಚಾರವಾಗಿದೆ. ನಮ್ಮ ಕುಟುಂಬದ ಹೆಸರಲ್ಲಿ 1 ದಿನದ ಸೇವೆ ಮಾಡಿಸುವಂತ ಭಕ್ತಾಭಿಮಾನಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಸಮಿತಿಯವರಲ್ಲಿ ತಿಳಿಸಿ ಶ್ರೀ ಅಯ್ಯಪ್ಪನಿಗೆ ಸೇವೆ ಸಲ್ಲಿಸಬಹುದಾಗಿದೆ ಅನ್ನದಾನಕ್ಕೆ ತಾವು ಬೆಳೆದ ದವಸ-ದಾನ್ಯ ಅಕ್ಕಿ-ತರಕಾರಿಗಳನ್ನು ನೀಡಿ ಭಕ್ತರು ಸಹ
ಈ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ ತಮ್ಮಗಳ ಸೇವೆ, ಭಾಗವಹಿಸುವಿಕೆಯಿಂದ ಉತ್ಸವ ಅದ್ದೂರಿಯಾಗುತ್ತಿರುವುದಕ್ಕೆ ತಮ್ಮಂತ ಕೊಡುಗೈ ದಾನಿಗಳ ಸೇವೆಯಿಂದ ಎಂದರೇ ತಪ್ಪಾಗಲಾರದು. ನಿಮ್ಮಗಳ ಹಾಗೂ ತಮ್ಮ ಕುಟುಂಬವರ್ಗದವರ ಸೇವೆ ಈ ಬಾರಿಯೂ ಅಯ್ಯಪ್ಪನ ಇಚ್ಚೆಯಂತೆ ನಡೆಯಲಿ. ಶ್ರೀ ಶಬರಿಮಲೆ ಅಯ್ಯಪ್ಪನ ಅನುಗ್ರಹ ಸದಾಕಾಲ ತಮ್ಮ ಕುಟುಂಬದ ಮೇಲಿರಲಿ ಎಂದು ಬೇಡುತ್ತಾ
ನಾವು ಈ ಬಾರಿಯ ಸೇವಾ ಕಾರ್ಯದಲ್ಲಿ ಹಾಗೂ ಜನವರಿ 1 ರಂದು ಮಧ್ಯಾಹ್ನ ಮತ್ತು ರಾತ್ರಿ ನಡೆಯಲಿರುವ ಮಹಾ ಅನ್ನದಾನ ಮತ್ತು ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಈ ಮೂಲಕ ಕೋರುತ್ತೇವೆ.

ಸೇವಾ ಕಾರ್ಯಗಳಿಗಾಗಿ ಸಂಪರ್ಕಿಸಿ

9448665253, 9449620358, 9448665254, 6360937451, 9480906711

ಗುರುಸ್ವಾಮಿಗಳು/ ಅಧ್ಯಕ್ಷರು/ ಪದಾಧಿಕಾರಿಗಳು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ರೇಣುಕನಗರ, ಬಾಳೆಹೊನ್ನೂರು.

Leave a Reply

Your email address will not be published. Required fields are marked *

Scan the code