32ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯವರ ಅನ್ನದಾನ, ದೀಪೋತ್ಸವ, ರಾಜಬೀದಿ ಉತ್ಸವ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರೇಣುಕನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಜನವರಿ 1/ 2025 ರಂದು 32 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯವರ ಅನ್ನದಾನ, ದೀಪೋತ್ಸವ, ರಾಜಬೀದಿ ಉತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಲಿವೆ, ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಆರ್ ಡಿ ಮಹೇಂದ್ರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅವರು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನೆಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಜನವರಿ 1 ರಂದು ಬೆಳಿಗ್ಗೆ ಭದ್ರಾನಧಿಯಿಂದ ಕನ್ನಿಸ್ವಾಮಿಗಳು ಆಗ್ರೋದಕ ತರುವುದರೊಂದಿ ಕಾರ್ಯಕ್ರಮ ಆರಂಭವಾಗಲಿದ್ದು 7 ಗಂಟೆಗೆ ಉಷಾ ಪೂಜೆ ಜರುಗಲಿದ್ದು ತದನಂತರ ಶ್ರೀ ಸ್ವಾಮಿಯವರ ಪೂಜಾ ಕಾರ್ಯಗಳು ಜರುಗಲಿದ್ದು 11.30 ರಿಂದ ಶ್ರೀ ಪ್ರಸನ್ನ ಗಣಪತಿ ಕಲಾ ತಂಡ” ದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಧ್ಯಾನ ನ 12.30 ಕ್ಕೆ ಅನ್ನದಾನ ಕಾರ್ಯಕ್ರಮ ಜರುಗಲಿದೆ ನಂತರ ಸಂಜೆ 5 ಗಂಟೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯವರ ರಾಜಬೀದಿ ಮೆರವಣಿಗೆಯು ರೇಣುಕನಗರದ ರಾಜಬೀದಿಯಲ್ಲಿ ಸಾಗಿ ಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ ತದನಂತರ ಜನಜಾಗೃತಿ ಧಾರ್ಮಿಕ ಸಭೆಯು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಲಿದ್ದು ಈ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಷ||ಭ್ರ|| ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ದೊಡ್ಡ ತಲಗಡ್ಡೆ ಸೊರಬ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರು ವಹಿಸಲಿದ್ದು ಈ ಕಾರ್ಯಕ್ರಮದಲ್ಲಿ ಉಪದೇಶಾಮೃತ ನುಡಿಯಲಿರುವವರು ಕನ್ನಡ ಪೂಜಾರಿ ಎಂದೇ ಖ್ಯಾತ ರಾದ ಶ್ರೀ ಹಿರೇಮಗಳೂರು ಕಣ್ಣನ್ ರವರು. ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಅನುಗ್ರಹದ ವಿದ್ಯಾರತ್ನ ಪ್ರಶಸ್ತಿಯನ್ನು ಈ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ಶ್ರೀ ಆರ್ ಡಿ ರವೀಂದ್ರರವರಿಗೆ ಹಾಗೂ ಶ್ರೀ ಅಯ್ಯಪ್ಪ ಅನುಗ್ರಹದ ಕಲಾರತ್ನ ಪ್ರಶಸ್ತಿಯನ್ನು ಕನ್ನಡ ಚಲನಚಿತ್ರ ನಾಯಕ ನಟರಾದ ಶ್ರೀ ಕಾಫಿ ಗಿರಿರವರಿಗೆ ನೀಡಿ ಸನ್ಮಾನಿಸಲಾಗುವುದು.
ಬಾಳೆಹೊನ್ನೂರಿನಲ್ಲಿ ವರ್ಷ ಶಬರಿಮಲೆ ಯಾತ್ರೆ ಮಾಡಿದಂತ ಶ್ರೀ ಶಂಕರ ಆಚಾರ್ಯ, ಶ್ರೀ ವಾಸುದೇವ್, ಶ್ರೀ ವಿಶ್ವನಾಥ್ ಶ್ರೀ ರಾಜೇಶ್ ರವರನ್ನು ಹಾಗೂ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 2024 ನೇ ಇಸವಿಯಲ್ಲಿ ಪ್ರತಿನಿಧಿಸಿದಂತ ಕ್ರೀಡಾ ಪಟುಗಳನ್ನು ಸನ್ಮಾನಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಕುಮಾರಿ ಸ್ಪೂರ್ತಿ ಉಮೇಶ್ ಹಾಗೂ ಕುಮಾರಿ ಸಾನ್ವಿಕ ಹರೀಶ್ ರವರಿಂದ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ನಂತರ ರಾತ್ರಿ 8.30 ಕ್ಕೆ ಮಹಾ ಅನ್ನದಾನ ಕಾರ್ಯಕ್ರಮ ಜರುಗಲಿದೆ ಎಂದು ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.
83 ಹರೆಯದ ಗುರುಸ್ವಾಮಿಗಳು ಶ್ರೀ ಎ ಕೆ ಪಿ ಕೃಷ್ಣಪೊದುವಾಳ್ ಗುರುಸ್ವಾಮಿ ನೇತೃತ್ವ
1980ರಲ್ಲಿ ಎ.ಕೆ.ಪಿ. ಕೃಷ್ಣಪೊದುವಾಳ್ ಗುರುಸ್ವಾಮಿಯವರು ಮಾಲೆ ಧರಿಸಿ, 1992 ರಿಂದ ಪ್ರಸನ್ನಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ನಿತ್ಯ ಅಭಿಷೇಕ, ಶಾಸ್ತ್ರೋಕ್ತ ಪೂಜೆ, ಭಜನೆ, ಅನ್ನದಾನ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಗುರುಸ್ವಾಮಿಯವರು ತಮ್ಮ 83 ನೇ ಇಳಿವಯಸ್ಸಿನಲ್ಲಿಯೂ ಸಹ ನೂರಾರು ಶಿಷ್ಯಂದಿರಿಗೆ ಮಾಲೆ ಧರಿಸಿ, ವ್ರತಾಚರಣೆ ಪೂಜಾ ಕೈಂಕರ್ಯ ನಡೆಸುತ್ತಿರುವುದು ಈ ಭಾಗದ ಅಯ್ಯಪ್ಪ ಭಕ್ತರಿಗೆ ಸಂತಸದ ವಿಚಾರ. ಅಲ್ಲದೇ ಈ ಇಳಿ ವಯಸಿನಲ್ಲಿಯೂ ಮುಂಜಾನೆ ೪ ರಿಂದ ಪೂಜೆ ಆರಂಬಿಸಿ ನಿತ್ಯ ಅಭಿಷೇಕವನ್ನು ಮಾಡುತ್ತಾ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿರುವುದು ನಮ್ಮ ಸುದೈವ ಎಂದು ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.
2024-25 ನೇ ಸಾಲಿನ ಶ್ರೀ ಅಯ್ಯಪ್ಪ ಅನುಗ್ರಹದ ವಿದ್ಯಾ ರತ್ನ ಪ್ರಶಸ್ತಿ ಶ್ರೀ ಆರ್ ಡಿ ರವೀಂದ್ರರವರಿಗೆ
ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ, ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವ ಈ ಸಂಧರ್ಬದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಸುದಾgಸುವ ಉದೇಶದಿಂದ ವರ್ಷದ 365 ದಿನವು ಚಿಂತಿಸುವ ವ್ಯಕ್ತಿ ಎನ್ನಲು ಹೆಮ್ಮೆ ಎನಿಸುತ್ತದೆ. ನಲಿಕಲಿ, ಸಿಸಿಇ, ಕೆಸಿಎಪ್, ಬಹುವರ್ಗ ಭೋಧನೆ ರಚನಾ, ಚಿಣ್ಣರ ಅಂಗಳ ಪಠ್ಯಪುಸ್ತಕ ರಚನೆ, ದೂರದ ಸಿಂಗಾಪುರದ ಕನ್ನಡಗರಿಗೆ ಆನ್ ಲೈನ್ ನಲ್ಲಿ ಕನ್ನಡ ಭೋದನೆ, ಕೆ ಎಸ್ ಕ್ಯೂ ಎ ಎ ಸಿ, ಟಿ ಪಿ ಡಿ ರಾಜ್ಯ ಸಂಪನ್ಮೂಲ ವ್ಯಕ್ತಿ, ಶಿಕ್ಷಣರತ್ನ ಪ್ರಶಸ್ತಿ ವಿಜೇತ, ಇತ್ತೀಚಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಮಂಡ್ಯ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ” ಗೋಷ್ಟಿಯಲ್ಲಿ ವಿಷಯ ಮಂಡನೆ ಮಾಡಿರುವುದು ನಮ್ಮೂರಿಗೆ ಹೆಮ್ಮೆ ತರುವ ಸಂಗತಿ ನಮ್ಮ ರೇಣುಕನಗರಕ್ಕೆ ಹೊಂದಿಕೊಂಡಿರುವ ಸ್ಕೂಲ್ ಗದ್ದೆಯವರಾದ ಶ್ರೀ ಆರ್ ಡಿ ರವೀಂದ್ರರವರಿಗೆ ತವರುಮನೆಯಾದ ನಮ್ಮೂರಿನ ಪರವಾಗಿ ಅಭಿನಂದನೆ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಅನುಗ್ರಹದ “ವಿದ್ಯಾ ರತ್ನ” ಪ್ರಶಸ್ತಿ ನೀಡುತಿದ್ದೇವೆ.
2024-25 ನೇ ಸಾಲಿನ ಶ್ರೀ ಅಯ್ಯಪ್ಪ ಅನುಗ್ರಹದ ಕಲಾರತ್ನ ಪ್ರಶಸ್ತಿ ಶ್ರೀ ಕಾಪಿ ಗಿರಿರವರಿಗೆ
2018ರಿಂದ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ರಾಜ್ಯದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತಿದ್ದು, ಕಲಾವಿದರನ್ನು ಪ್ರೋತ್ಸಾಹಿಸಿ ಅವರ ಕಲೆಗೆ ಸೂಕ್ತ ಗೌರವ ನೀಡುವುದು ನಮ್ಮ ಆಧ್ಯ ಕರ್ತವ್ಯವಲ್ಲದೇ ಶ್ರೀ ಶಬರಿಮಲ ಅಯ್ಯಪ್ಪನ ಅನುಗ್ರಹ ಸದಾಕಾಲ ಈ ಕಲಾವಿದರ ಮೇಲಿರಲಿ ಎಂಬ ಮಹದಾಶಯ ನಮ್ಮದು. ಈ ಬಾರಿ ಆಯ್ಕೆಯಾದ ಕಲಾವಿದರು ನಮ್ಮ ಬಾಳೆಹೊನ್ನೂರಿಗೆ ಹೊಂದಿಕೊಂಡಿರುವ ಹುಯಿಗೆರೆಯ ಶ್ರೀ ಕಾಪಿ ಗಿರಿರವರು ನಾಯಕ ನಟರಾಗಿ ನಟಿಸಿರುವ “ನಾಯಿಗೆರೆ” ಎಂಬ ಚಲನಚಿತ್ರವು ರಾಜ್ಯಪ್ರಶಸ್ತಿ ಪಡೆದಿದ್ದಲ್ಲದೇ ಮೈಸೂರು ದಸಾರ ಉತ್ಸವದಲ್ಲಿ ಈ ಚಲನಚಿತ್ರವು ಪ್ರದರ್ಶನ ಗೊಂಡಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ನೆಡೆದ ಸೌತ್ ಅವಾರ್ಡ್ ಪಿಲಂ ಪೆಸ್ಟಿವಲ್ ನಲ್ಲಿ ಇವರ ನಟನೆಯ ಚಿತ್ರ ಆಯ್ಕೆಯಾಗಿದ್ದು, 20 ಕ್ಕೂ ಹೆಚ್ಚು ಚಲನಚಿತ್ರ, 20 ಕ್ಕೂ ಹೆಚ್ಚು ದಾರಾವಾಹಿ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ನಮ್ಮೂರಿನ ಸಾಧಕರಿಗೆ ಈ ಬಾರಿಯ ಶ್ರೀ ಅಯ್ಯಪ್ಪ ಅನುಗ್ರಹದ “ಕಲಾರತ್ನ ಪ್ರಶಸ್ತಿ” ನೀಡಿ ಮುಂದಿನದಿನಗಳಲ್ಲಿ ಇವರ ಭವಿಷ್ಯ ಉಜ್ವಲವಾಗಲಿ ಎಂಬುದು ನಮ್ಮ ಮಹದಾಶಯ ಎಂದು ಆರ್ ಡಿ ಮಹೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.