ದೇಶಿಹಳ್ಳಿ ಗ್ರಾಮದಲ್ಲಿ 33ನೇ ವರ್ಷದ ಗಣೇಶೋತ್ಸವ
(KOLARA): ಬಂಗಾರಪೇಟೆ: ಪಟ್ಟಣದ ದೇಶಿಹಳ್ಳಿ ಗ್ರಾಮದಲ್ಲಿ
ಶ್ರೀ ವಿನಾಯಕ ಯುವಕರ ಸಂಘದ ವತಿಯಿಂದ 33ನೇ ವರ್ಷದ ಗಣೇಶ ಹಬ್ಬ ಆಚರಣೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಹಮ್ಮಿಕೊಳ್ಳಲಾಗಿತ್ತು. ನಿನ್ನೆಯಿಂದಲೇ ಗಣೇಶನಿಗೆ ಯುವಕರೆಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಅಲಂಕರಿಸಿ ಪೂಜೆಗಳನ್ನು ನೆರವೇರಿಸಿ ಇಂದು ಮೂರನೇ ದಿನ ಆದ ಹಿನ್ನೆಲೆ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇಶಿಹಳ್ಳಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಗಣೇಶ ಹಬ್ಬ ಎಂದರೆ ಯುವಕರಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ. ಆ ಭಾಗದ ಜನರೆಲ್ಲರೂ ಭೇದ ಭಾವವಿಲ್ಲದೆ ಸೇರಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಗಣೇಶ ಹಬ್ಬ ಬಂದರೆ ಸಾಕು ಯುವಕರಲ್ಲಿ ಉತ್ಸಾಹ ಉಕ್ಕಿ ಹರಿಯುತ್ತದೆ. ಗಣೇಶ ಹಬ್ಬವೆಂದರೆ ಎಲ್ಲರಿಗೂ ಹಚ್ಚು ಮೆಚ್ಚು ಮೂರು ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿ ನಂತರ ವಿಸರ್ಜನೆ ಮಾಡುವ ತನಕ ಯುವಕರು ಬಹಳ ಉತ್ಸಾಹದಿಂದ ಆಚರಣೆ ಮಾಡುವ ಹಬ್ಬವೆಂದರೆ ಅದು ಗಣೇಶ ಹಬ್ಬ ಎಂದು ಹೇಳಬಹುದು.
ವರದಿ: ವಿಷ್ಣು ಕೋಲಾರ