ಚಿಕ್ಕಮಗಳೂರುಮನರಂಜನೆ

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಆದರ್ಶನಗರ, ಇಟ್ಟಿಗೆ-ಸೀಗೋಡು, ಬಾಳೆಹೊನ್ನೂರು. 41 ನೇ ವರ್ಷದ ಶ್ರೀ ಗಣೇಶೋತ್ಸವ

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಆದರ್ಶನಗರ, ಇಟ್ಟಿಗೆ-ಸೀಗೋಡು, ಬಾಳೆಹೊನ್ನೂರು. 41 ನೇ ವರ್ಷದ ಶ್ರೀ ಗಣೇಶೋತ್ಸವ

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಆದರ್ಶನಗರ, ಇಟ್ಟಿಗೆ-ಸೀಗೋಡು, ಬಾಳೆಹೊನ್ನೂರು. 41 ನೇ ವರ್ಷದ ಶ್ರೀ ಗಣೇಶೋತ್ಸವದ ಕಳೆದ 40 ವರ್ಷಗಳಿಂದ ತಮ್ಮೆಲ್ಲರ ತುಂಬು ಹೃದಯದ ಸಹಕಾರದಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ವಿದ್ಯಾಗಣಪತಿ ಮಹೋತ್ಸವವು ಈ ವರ್ಷ ಶಾಲಿವಾಹನ ಶಕವರ್ಷ 1946ನೇ ಸ್ವಸ್ತಿಶ್ರೀ ಶೋಭಕೃನ್ನಾಮ ಸಂವತ್ಸರದ ಭಾದ್ರಪದ ಮಾಸ ಶುಕ್ಲಪಕ್ಷದ ಚತುರ್ಥಿ ದಿನಾಂಕ 18-09-2023ನೇ ಸೋಮವಾರ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ 22-09-2023ನೇ ಶುಕ್ರವಾರ ಸಂಪನ್ನಗೊಳ್ಳಲಿದೆ. ಈ ಪೂಜಾ ಮಹೋತ್ಸವಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನ ಪೂರ್ವಕ ಸಹಕರಿಸಿ, ಉತ್ಸವದ ಯಶಸ್ಸಿನಲ್ಲಿ ಭಾಗಿಗಳಾಗಿ ತನ್ಮೂಲಕ ಶ್ರೀ ವಿದ್ಯಾಗಣಪತಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಆದರ್ಶನಗರ, ಇಟ್ಟಿಗೆ ಸೀಗೋಡು.


ಕಾರ್ಯಕ್ರಮಗಳು
ದಿನಾಂಕ : 18-09-2023ನೇ ಸೋಮವಾರ
ಬೆಳಿಗ್ಗೆ 10.00 ರಿಂದ 10.30ರೊಳಗೆ ಶ್ರೀ ವಿದ್ಯಾಗಣಪತಿ ಪ್ರತಿಷ್ಠಾಪನೆ, ಪೂಜೆ, ಮಂಗಳಾರತಿ ಪ್ರಸಾದ ವಿನಿಯೋಗ
ಸಂಜೆ 7.00 ಗಂಟೆಗೆ ಯುವ ಗಾಯಕಿ ಪಲ್ಲವಿ ಮತ್ತು ತಂಡ, ವಿನಾಯಕ ಕಲಾಬಳಗ, ಆದರ್ಶನಗರ ಇವರಿಂದ “ಭಕ್ತಿ-ಭಾವ ಚಿತ್ರ ಗಾಯನ ಸಂಜೆ”.

ದಿನಾಂಕ : 19-09-2023ನೇ ಮಂಗಳವಾರ
ಮಧ್ಯಾಹ್ನ 12.30 ರಿಂದ 1.30 ರವರೆಗೆ ಸಾರ್ವಜನಿಕ ಪೂಜೆ,
ಮಂಗಳಾರತಿ ಪ್ರಸಾದ ವಿನಿಯೋಗ.
ಸಂಜೆ 7.00 ಗಂಟೆಗೆ “ಶಂಕರ್ ಜಾದುಗಾರ್” ರಿಪ್ಪಾನ್‌ಪೇಟೆ ಇವರಿಂದ“ಇಂಗ್ಲೆಂಡ್‌ನ ಮಾತನಾಡುವ ಗೊಂಬೆ, ಸೇರಿದಂತೆ ಇನ್ನು ಹಲವಾರು ಮೈ ರೋಮಾಂಚನಗೊಳಿಸುವ ಜಾದು ಪ್ರದರ್ಶನ”

ದಿನಾಂಕ : 20-09-2023ನೇ ಬುಧವಾರ
ಮಧ್ಯಾಹ್ನ 12.30-1.30ರವರೆಗೆ ಸಾರ್ವಜನಿಕ ಪೂಜೆ, ಮಂಗಳಾರತಿ ಪ್ರಸಾದ ವಿನಿಯೋಗ,
ಸಂಜೆ 7.00 ಗಂಟೆಗೆ ಸ್ಟೆಪ್ ಅಪ್ ಸ್ಕೂಲ್ ಆಫ್ ಡ್ಯಾನ್ಸ್
ಅಂಡ್ ಮ್ಯೂಸಿಕ್, ಬಾಳೆಹೊನ್ನೂರು ಇವರಿಂದ “ನೃತ್ಯ ವೈಭವ. 

ದಿನಾಂಕ : 21-09-2023ನೇ ಗುರುವಾರ
ಬೆಳಿಗ್ಗೆ 9.00ರಿಂದ ಸಾಮೂಹಿಕ ‘ಶ್ರೀ ಸತ್ಯನಾರಾಯಣ ಪೂಜೆ ನಂತರ 10.00 ಗಂಟೆಯಿಂದ ಮಹಿಳೆಯರಿಗೆ “ರಂಗೋಲಿ ಸ್ಪರ್ಧೆ”.ಸಂಜೆ 7.00 ಗಂಟೆಗೆ ಚೈತನ್ಯ ಕಲಾವಿದರು ಬೈಲೂರು (ಮಂಗಳೂರು) ತಂಡದ ಈ
ವರ್ಷದ ಅಮೋಘ ಹಾಸ್ಯಮಯ ಕನ್ನಡ ನಾಟಕ “ಪವಿತ” (ಸತ್ಯ ಆಧಾರಿತ ಕಥೆ)ರಚನೆ, ನಿರ್ದೇಶನ ಮತ್ತು ಸಾರಥ್ಯ ಪ್ರಸನ್ನ ಶೆಟ್ಟಿ ಬೈಲೂರು. ಇವರಿಂದ ಹಾಸ್ಯಮಯ ನಾಟಕ.

ದಿನಾಂಕ : 22-09-2023ನೇ ಶುಕ್ರವಾರ
ಬೆಳಿಗ್ಗೆ 9.00-12.30ರವರೆಗೆ ವಿಶ್ವೇಶ್ವರ ಕಲಾ ಬಳಗ ಇವರಿಂದ ಗೇಮ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಧ್ಯಾಹ್ನ 12.35ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಧ್ಯಾಹ್ನ 1.00 ಗಂಟೆಗೆ. ‘ಅನ್ನ ಸಂತರ್ಪಣೆ’
ನಂತರ “ಶ್ರೀ ರಾಜು ಸೌಂಡ್ಸ್” ಬಾಳೆಹೊನ್ನೂರು ಇವರಿಂದ ವಿಶೇಷ ಆಕರ್ಷಣೆ ಸಂಚಾರಿ ಗಾನವೈಭವ ಹಾಗೂ ಎಸ್.ಆರ್.ಎನ್. ನಾಸಿಕ್ ಬ್ಯಾಂಡ್ ಗ್ರೂಫ್,ಆದರ್ಶನಗರ ಇವರಿಂದ “ನಾಸಿಕ್ ಡೋಲ್” ಹಾಗೂ ಇನ್ನಿತರ ವಿಶೇಷ
ಆಕರ್ಷಣೆಗಳೊಂದಿಗೆ ಬಾಳೆಹೊನ್ನೂರಿನ ರಾಜಬೀದಿಯಲ್ಲಿ
ಶ್ರೀ ವಿದ್ಯಾಗಣಪತಿಯ ಮೆರವಣಿಗೆಯೊಂದಿಗೆ ಭದ್ರಾನದಿಯಲ್ಲಿ ವಿಸರ್ಜಿಸಲಾಗುವುದು,

Leave a Reply

Your email address will not be published. Required fields are marked *

Scan the code