ನ್ಯೂಸ್ರಾಜ್ಯ

ಐಟಿ ದಾಳಿಗೆ ಮಂಚ ದಡಿಯಲ್ಲಿದ್ದ 42 ಕೋಟಿ…ಕೋಟಿ ರೂ ಹಣ ವಶ.

ಐಟಿ ದಾಳಿಗೆ ಮಂಚ ದಡಿಯಲ್ಲಿದ್ದ 42 ಕೋಟಿ…ಕೋಟಿ ರೂ ಹಣ ವಶ.

(BENGALURU): ಹಿಂದಿನ ಬಿಜೆಪಿ ಸರಕಾರದ ಮೇಲೆ 40% ಸರಕಾರ ಎಂದು ಸುಳ್ಳು ಆರೋಪ ಮಾಡಿದ, ಕಾಂಗ್ರೆಸ್ಸಿನ ಹಿರಿಯ ನಾಯಕರ ಆಪ್ತ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಆತನ ಪತ್ನಿ ಕಾಂಗ್ರೆಸ್ಸಿನ ಮಾಜಿ ಕಾರ್ಪೊರೇಟರ್ ದಂಪತಿಯ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಂಚದ ಕೆಳಗೆ ಇಟ್ಟಿದ್ದ ಕೋಟಿ ಕೋಟಿ ಹಣವನ್ನು ವಶಪಡಿಸಿಕೊಂದಿದ್ದಾರೆ.

ಮೊನ್ನೆಯ ಪಾಲಿಕೆಯಲ್ಲಿ ₹600 ಕೋಟಿ ಬಾಕಿ ಹಣ ಬಿಡುಗಡೆಯಾಗಿತ್ತು. ಇದು ಅದರ ಕಮಿಷನ್ ಹಣದ ಬಾಬ್ತು ಎಂದು ಅನೇಕ ಗುತ್ತಿಗೆದಾರರು ಹೇಳುತ್ತಿದ್ದಾರೆ.

ನೆನ್ನೆ ಒಮ್ಮೆಲೆ ಆರ್‌.ಟಿ. ನಗರದ ಎರಡು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದ್ದು, ಕಂತೆ ಕಂತೆ ನೋಟುಗಳನ್ನ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಆತ್ಮಾನಂದ ಕಾಲೋನಿಯ ಬಿಬಿಎಂಪಿ ಗುತ್ತಿಗೆದಾರ ಹಾಗೂ ಅವರ ಮಗಳ ಮನೆಯ ಮಂಚದಡಿಯಲ್ಲಿ 23 ಬಾಕ್ಸ್‌ಗಳಲ್ಲಿ ರಾಶಿ ಹಣ ಪತ್ತೆಯಾಗಿವೆ. 23 ಬಾಕ್ಸ್‌ಗಳಲ್ಲಿ 500 ಮುಖಬೆಲೆಯ ಒಟ್ಟು 42 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಗಣೇಶ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೋರೇಟರ್‌ ಅಶ್ವತ್ಥಾಮ ನಿವಾಸದ ಮೇಲೆ ಐಟಿ ದಾಳಿ ನಡೆಸಿ, ಅಲ್ಲಿಯೂ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಸಧ್ಯ ಸಿಕ್ಕಿರುವ ಕೋಟ್ಯಂತರ ರೂಪಾಯಿ ಹಣ ಯಾರಿಗೆ ಸೇರಿದ್ದು ಅಂತ ಅಧಿಕಾರಿಗಳು ತನಿಖೆ ನಡೆಸ್ತಾ ಇದ್ದಾರೆ.

Leave a Reply

Your email address will not be published. Required fields are marked *

Scan the code