ಫುಟ್ಪಾತ್ ಅಭಿವೃದ್ಧಿಗಾಗಿ 7.5 ಕೋಟಿ ಮಂಜೂರು; ಶಾಸಕ ಎಸ್ಎನ್ ನಾರಾಯಣಸ್ವಾಮಿ.
(KOLARA): ಬಂಗಾರಪೇಟೆ : ಪ್ರತಿ ವಾರದಂತೆ ಈ ವಾರವು ಸಹ ನಗರ ಪ್ರದರ್ಶನವನ್ನು ಮಾಡಿದ್ದೇನೆ,ನಗರದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.ನಗರವನ್ನು ಸೌಂದರ್ಯವಾಗಿ ಇಡಲು ವಿಶೇಷವಾಗಿ 7.5 ಕೋಟಿ ಪುಟ್ ಪಾತ್ ಅಭಿವೃದ್ಧಿಗಾಗಿ ಮಂಜೂರು ಮಾಡಿದ್ದೇನೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.
ನಗರ ಪ್ರದರ್ಶನವನ್ನು ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೋಮವಾರ ಒಂದು ತಂಡ ಬರುತ್ತಿದೆ. ಆ ತಂಡ ಪಟ್ಟಣ ವ್ಯಾಪ್ತಿ ಪರಿಶೀಲನೆ ನಡೆಸಿ ಯಾವ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಅವರು ತೀರ್ಮಾನ ಮಾಡುತ್ತಾರೆ. ನಂತರ ಆದಷ್ಟು ಬೇಗ ಪಟ್ಟಣ ವ್ಯಾಪ್ತಿ ಇರುವಂತಹ ಮುಖ್ಯ ರಸ್ತೆಗಳಾದ ಮಾದಯ್ಯ ರಸ್ತೆ, ಒಸ್ವಲ್ ಆಸ್ಪತ್ರೆ ರಸ್ತೆ, ಬಜಾರ್ ರಸ್ತೆ, ಮತ್ತು ನಂದಿ ಮೆಡಿಕಲ್ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇನೆ ಎಂದರು.
ಇಂದು ನಗರ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಅನೇಕರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಸ್ಥಳದಲ್ಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡಲಾಗಿದೆ. ನಮ್ಮ ಉದ್ದೇಶ ಒಂದೇ ನಗರವನ್ನು ಸ್ವಚ್ಛವಾಗಿಡಬೇಕು, ನಗರವನ್ನು ಅಭಿವೃದ್ಧಿಪಡಿಸಬೇಕು ನನ್ನ ಮೂಲ ಉದ್ದೇಶವಾಗಿದೆ. ಹಾಗಾಗಿ ಶನಿವಾರ ಬದಲಾಗಿ ಪ್ರತಿ ಭಾನುವಾರ ನಗರ ಪ್ರದರ್ಶನವನ್ನು ಮಾಡುತ್ತೇನೆ.ವಾರದಲ್ಲಿ ಒಂದೊಂದು ವಾರ್ಡಿಗೆ ಹೋಗಿ ಆ ವಾರ್ಡ್ಗಳ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಅರುಣಾಚಲಂ ಮಣಿ, ಎಸ್ ವೆಂಕಟೇಶ್, ಮುಖಂಡರಾದ ಶೇಖರ್, ವೆಂಕಟೇಶ್, ರವಿ, ಇನ್ನು ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ