ಭೀಕರ ದುರಂತಕ್ಕೆ ಒಂದೇ ಕುಟುಂಬದ 7 ಜನರ ಸಾವು
(VIJAYANAGARA): ದೇವರ ದರ್ಶನ ಪಡೆದು ಹಿಂದಿರುಗುವಾಗ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಜನರ ಸಾವು. ವಿಜಯನಗರ ಜಿಲ್ಲೆ, ಹೊಸ ಪೇಟೆಯಲ್ಲಿ ಭೀಕರ ಅಪಘಾತ ನಡೆದಿದೆ. ಲಾರಿ ಆಕ್ಸೆರ್ ಕಟ್ಟಾಗಿ ಮುಂದೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಬರೋಬ್ಬರಿ 7 ಜನರು ಮೃತಪಟ್ಟ ದುರಂತ ಹೊಸಪೇಟೆಯ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ತಮ್ಮ ಮನೆಯ ದೇವರ ದರ್ಶನ ಪಡೆದು ಹಿಂತಿರುಗುವಾಗ ಊಹಿಸಲಾರದ ಅಪಘಾತ ಸಂಭವಿಸಿದ್ದು.
ಜನರು ಇದ್ದ ಕಾರು ಪೂರ್ತಿಯಾಗಿ ಜಜ್ಜಿ ಹೋಗಿದೆ, ಲಾರಿ ಪಲ್ಟಿಯಾಗಿ ಬಿದ್ದಿದ್ದು, 7 ಜನರು ವಿಕಾರವಾಗಿ ದುರ್ಮರಣ ಹೊಂದಿದ್ದಾರೆ. ಈ ಭೀಕರ ಅಪಘಾತದಿಂದಾಗಿ ಗೋಣಿಬಸಪ್ಪ (65), ಕೆಂಚವ್ವ (80) ಭೀಮ ಲಿಂಗಪ್ಪ (50), ಉಮಾ (45), ಅನಿಲ್ (30), ಮತ್ತು ಯುವರಾಜ್ (4) ಹಾಗು ಕೆಲವರನ್ನು ತಕ್ಷಣವಾಗಿ ಆಸ್ಪತ್ರೆಗೆ ದಾಖಲಿಸಿದ್ದರು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೊಸಪೇಟೆ ಮತ್ತು ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿ ಕೊಂಡಿದ್ದಾರೆ ವ್ಯಾಸನಕೇರಿ ಮತ್ತು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ದುರಂತ ಸಂಭವಿಸಿದೆ. ಈ ಅಪಘಾತ ನೋಡಿದವರಿಗೆ ಅಯ್ಯೋ ಎನಿಸುವಷ್ಟು ಭೀಕರವಾಗಿದೆ. ಒಂದೇ ಕುಟುಂಬದ 7 ಜನರು ಮೃತಪಟ್ಟಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ಸುನಿಲ್ ಕುಮಾರ್ ಎಂ NSD