ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ: 9 ನಾಟಕಗಳ ಪ್ರದರ್ಶನ
(BALLARI): ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಎಂಎ ಡ್ರಾಮಾ ಅಂತಿಮ ವರ್ಷದ ವಿದ್ಯಾರ್ಥಿಗಳು 9 ನಾಟಕಗಳನ್ನು ಪ್ರದರ್ಶಿಸಿದ್ದಾರೆ. ವಿಶ್ವವಿದ್ಯಾಲಯದ ಎಂಎ ಡ್ರಾಮಾ ಮಾರ್ಗದರ್ಶಕರು ಆದಂತಹ ಡಾ. ಶಾಂತ ನಾಯ್ಕ್, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಡಾ. ಸಹನಾ ಪಿಂಚರ್ ಹಾಗೂ ಹೇಮೇಶ್ವರ ಕುರುಬರು ಇವರ ಮಾರ್ಗದರ್ಶನದಲ್ಲಿ
ಅಪ್ಪ, ಹೀಗೊಬ್ಬ ಹುಡುಗನ ಸ್ವಾಗತ, ಅಡವಿ, ಹಾರೋ ಹಕ್ಕಿ, ಹೋರಾಟ, ಕೃಷ್ಣೆಗೌಡನ ಆನೆ, ಭಗತ್ ಸಿಂಗ್, ಎನ್ನುವ 9 ನಾಟಕಗಳು ಪ್ರದರ್ಶನಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾರ್ಥವಾಗಿ ಎಲ್ಲಾ ವಿದ್ಯಾರ್ಥಿಗಳು ನಾಟಕವನ್ನು ನಿರ್ದೇಶನ ಮಾಡಿ ತಮ್ಮ ಅಂತಿಮ ವರ್ಷದ ಎಂಎ ಪ್ರಾಯೋಗಿಕವಾಗಿ ಎಲ್ಲಾ ನಾಟಕಗಳು ಪ್ರದರ್ಶನಗೊಂಡಿವೆ. ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಈ ನಾಟಕಗಳಲ್ಲಿ ಭಾಗವಹಿಸಿದ್ದರು.