ಅಂದರ್ ಬಾಹರ್ ಆಡುತ್ತಿದ್ದ 9 ಜನ ಪೋಲಿಸರ ವಶ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ದಿನಾಂಕ 03.11.2023 ರಾತ್ರಿ ವೇಳೆ ಯಲ್ಲಿ ಒಂಬತ್ತು ಜನರು ಕೂತು ಅಂದರ್ ಬಾಹರ್ ಜೂಜಾಟ ಆಟ ಆಡುತ್ತಿದ್ದ 9 ಮಂದಿಯನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ತಲಗೋಡು-ಕೆಂಪನಮಕ್ಕಿ ಕಡೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 9 ಜನರನ್ನು ಪಿ.ಎಸ್.ಐ. ಕಳಸ ಮತ್ತು ತಂಡ ವಶಕ್ಕೆ ಪಡೆದುಕೊಂಡು,
ಜೂಜಾಟ ಆಟ ಆಡುತ್ತಿದ್ದ 9 ಮಂದಿಯರ ಬಳಿ ರೂ. 87,350/- ನಗದು ವಶಪಡಿಸಿಕೊಂಡಿರುತ್ತಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.