ಧರೆಗುರುಳಿದ 3 ಶತಮಾನಗಳ ಕಾಲದ ಅರಳಿಮರ. ಬೃಹತ್ ಗಾತ್ರದ ಆಕರ್ಷಣೆಯ ಮರ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆರೆಹೊಸಹಳ್ಳಿ ಗ್ರಾಮದಲ್ಲಿ ಇಂದು ಸುರಿದ ಬಿರುಗಾಳಿ ಸಹಿತ ಮಳೆಗೆ 3 ಶತಮಾನಗಳ ಕಾಲದ ಅರಳಿಮರ ಧರೆಗುರುಳಿದೆ,
ಸುಮಾರು 35ಮೀಟರ್ ಎತ್ತರವಿದ್ದ ಮರವು ದೊಡ್ಡ ದೊಡ್ಡ ರೆಂಬೆ ಕೊಂಬೆಗಳನ್ನು ಹೊಂದಿತ್ತು. ಮೂರು ದಶಕಗಳ ಮರವಾಗಿದ್ದರಿಂದ ಮರದ ರೂಮ್ ಬಾಯ್ ಕೊಂಬೆಗಳು ಮಳೆ ಗಾಳಿಗೆ ಬೀಳುವುದೆಂದು ಅದರಿಂದ ಅಪಾಯವಾಗುವುದೆಂದು ಗ್ರಾಮಸ್ಥರು ದೊಡ್ಡ ರಂಬೆ ಗೊಂಬೆಗಳನ್ನು ಕಸಿ ಮಾಡಿದ್ದರು. ಇಂದು ಬಿರುಗಾಳಿ ಮಳೆಗೆ ನೋಡ ನೋಡುತ್ತಿದ್ದಂತೆ ಮರ ಧರೆಗುರುಳಿದೆ. ನೆರಳು, ಶುದ್ಧ ಗಾಳಿ ಕೊಡುತ್ತಿದ್ದ, ಗ್ರಾಮದ ಆಕರ್ಷಣೆ ಆಗಿದ್ದ ಮರ ಇನ್ನು ನೆನಪು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.