ಶೃಂಗೇರಿ ಕ್ಷೇತ್ರದಲ್ಲೊಂದು ಆರು ತಿಂಗಳಿಗೊಮ್ಮೆ ಕಬ್ಬಿಣ ಕಾಣಿಸಿಕೊಳ್ಳುವ ಸೇತುವೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಬಿ ಕಣಬೂರು ವ್ಯಾಪ್ತಿಗೆ ಒಳಪಡುವ ಬಾಳೆಹೊನ್ನೂರು ಪಟ್ಟಣದ ಡೋಬಿ ಹಳ್ಳ ಸೇತುವೆ ಆರು ತಿಂಗಳಿಗೊಮ್ಮೆ ಕಬ್ಬಿನ ಕಾಣಿಸಿಕೊಳ್ಳುವ ವಿಸ್ಮಯ ಸೇತುವೆಯಾಗಿದೆ.
ಡೋಬಿ ಹಳ್ಳ ಸೇತುವೆ ಕಾಮಗಾರಿ ಸಮಯದಲ್ಲಿ ಹಾಕಿರುವ ಕಬ್ಬಿಣದ ರಾಡ್ಗಳು ಆರು ತಿಂಗಳಿಗೊಮ್ಮೆ ವಿಸ್ಮಯದಂತೆ ಹೊರಬರುತ್ತದೆ. ಈಗ ಆ ಕಬ್ಬಿಣಗಳು ವಾಹನ ಸವಾರರಿಗೆ ಯಮನಂತೆ ಗೋಚರಿಸುವುದು ಯಾವುದೇ ಸಂಶಯವಿಲ್ಲ. ಇತ್ತ ಒಂದು ಕಡೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಕೆಲವು ಪಟ್ಟಣಗಳಲ್ಲಿ ಗುಂಡಿ ಮುಚ್ಚಿಸಿದ್ದಕ್ಕೆ ಬ್ಯಾನರ್ ಕಟ್ಟಿಸಿ ಅಭಿಮಾನಿಗಳು ಸಂಭ್ರಮಿಸುದ್ದರೆ ಇತ್ತ ಯಮನಂತೆ ಕಾಯುತ್ತಿದ್ದವೇ ರಾಡ್ಗಳು, ಬಿ ಕಣಮೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಅದು ನಮಗೆ ಬರುವುದಿಲ್ಲ, ನಮಗೆ ಸೇರುವುದಿಲ್ಲ ಅದು PWO ಅಧಿಕಾರಿಗಳಿಗೆ ಸೇರಿದ್ದು ಎಂದು ಕೈ ತೊಳೆದುಕೊಂಡಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತ ಸಹ ಗಮನ ಗಮನಹರಿಸಿ ಸೇತುವೆಯ ರಾಡ್ಗಳು ಮುಚ್ಚಿಸಿದರೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.