ಜಯಪ್ರಕಾಶ್ ಹೆಗ್ಡೆ ಆಫೀಸ್ ನಿಂದ ಕ್ಷೇತ್ರದ ಎಲ್ಲಾ ಮತದಾರರಿಗೂ ಕರೆ. ಗ್ಯಾರಂಟಿ ಅಪ್ಲೈ ಆಗಿದೆಯಾ?
(CHIKKAMAGALURU): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಯಪ್ರಕಾಶ್ ಹೆಗ್ಡೆ ಆಫೀಸ್ ನಿಂದ ಕ್ಷೇತ್ರದ ಎಲ್ಲಾ ಮತದಾರರಿಗೂ ಕರೆ ಮಾಡಿ ವಿಚಾರಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಫಲ ದೊರಕಿದೆಯಾ? ಎಂದು ಹಾಗೂ ಗ್ಯಾರಂಟಿಗಳನ್ನು ಸೂಕ್ತವಾಗಿ ತಮಗೆ ದೊರಕಿದೆಯೇ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಮತದಾರರಿಗೂ ಜಯಪ್ರಕಾಶ್ ಹೆಗ್ಗಡೆ ಅವರ ಆಫೀಸ್ ನಿಂದ ಕರೆ ಮಾಡಿ ವಿಚಾರಿಸಲಾಗುತ್ತಿದೆ.
ಈ ಪೈಕಿ ಕ್ಷೇತ್ರದ ಐದು ಗ್ಯಾರಂಟಿಗಳ ಫಲಾನುಭವಿಗಳ ಪಟ್ಟಿ ತಯಾರಿ ಮಾಡಲಾಗುತ್ತಿದೆ ಗ್ಯಾರಂಟಿಗಳು ದೊರಕಿದ್ದು, ದೊರಕದಿದ್ದವರ ಪಟ್ಟಿ ಮಾಡಲಾಗುತ್ತಿದೆ ಎಂದು ಜಯಪ್ರಕಾಶ್ ಹೆಗ್ಡೆ ಅವರ ಆಫೀಸ್ ನಿಂದ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾರೆ.