ಜಿಲ್ಲೆನ್ಯೂಸ್

ಹಾವಾಡಿಗರ ಕೇರಿಯವರಿಂದ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲು

ಹಾವಾಡಿಗರ ಕೇರಿಯವರಿಂದ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲು

(SHIVAMOGA): ಸಾಗರ ತಾಲ್ಲೂಕು, ತಾಳಗುಪ್ಪ ಹೋಬಳಿ, ಶಿರವಂತೆ ಗ್ರಾಮದ ಹಾವಾಡಿಗರ ಕೇರಿಯವರಿಂದ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಾದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಾಗರ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಸಾಗರದ dysp ಕಛೇರಿ ಎದರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.


ಪ್ರಕರಣ ದಾಖಲಾದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಯಿತು. ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ, ಶಿರವಂತೆ ಗ್ರಾಮದ ಸ.ನಂ. 74/4 ರಲ್ಲಿ ಬಸವರಾಜಗೌಡ ಎಂಬುವವರಿಗೆ 1-16 ಎಕರೆ ಪಿತ್ರಾರ್ಜಿತ ಆಸ್ತಿ ಇರುತ್ತದೆ. ಈ ಜಮೀನಿಗೆ ಹೊಂದಿಕೊಂಡಂತೆ ಉತ್ತರ ದಿಕ್ಕಿನಲ್ಲಿ ಹಾವಾಡಿಗರ ಕೇರಿಯವರು ವಾಸ ಮಾಡುತ್ತಿದ್ದಾರೆ. ಆದರೆ ಇವರು ಈ ಜಮೀನಿನ ಮಾಲೀಕರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ನೀಡುತ್ತಾ ಬಂದಿರುವುದು ಮತ್ತು ಜಮೀನನ್ನು ಅತಿಕ್ರಮಣ ಮಾಡುತ್ತಾ ಬಂದಿರುತ್ತಾರೆ. ದಿನಾಂಕ : 17- 01-2024 ರಂದು ಈ ಮಾಲೀಕರ ಜಮೀನನ್ನು ಅತಿಕ್ರಮಣ ಸಾಗುವಳಿ ಮಾಡುತ್ತಿದ್ದಾಗ 112 ಪೊಲೀಸ್ ಕರೆಸಿ ಕೆಲಸವನ್ನು ನಿಲ್ಲಿಸಿ ಹಾವಾಡಿಗರ ಕೇರಿಯ ವೆಂಕಟೇಶ, ಬಾಬು, ಲಕ್ಷ್ಮಿ, ಮಣಿಕಂಠ, ಕೃಷ್ಣ ಇತರರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಫ್.ಐ.ಆರ್. ನಂ. 11/2024 ರಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ.

ಆದರೆ ಈ ಹಾವಾಡಿಗರ ಕೇರಿಯವರು ಈ ಜಮೀನಿನ ಮಾಲೀಕರು ಅಟ್ರಾಸಿಟಿ ಪ್ರಕರಣ ದಾಖಲು ಮಾಡಿರುತ್ತಾರೆ. ಈ ಮೂಲಕ ಹಾವಾಡಿಗರ ಕೇರಿಯವರು ಆಟ್ರಾಸಿಟಿ ಪ್ರಕರಣವನ್ನು ಸುಳ್ಳು ದಾಖಲಿಸಿರುತ್ತಾರೆ. ಈ ಮೂಲಕ ಆಟ್ರಾಸಿಟಿ ಕಾನೂನನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಈಗಾಗಲೇ ಈ ಹಾವಾಡಿಗರ ಕೇರಿಯವರ ವಿರುದ್ಧ ನಾಗರೀಕ ಜಾರಿ ನಿರ್ದೇಶನಾಲಯ, ದಾವಣಗೆರೆ ಇಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿಗೆ ವರದಿಯನ್ನು ಕಳುಹಿಸಲಾಗಿದೆ. ಅಲ್ಲದೇ ಇವರು ಹಾವಾಡಿಗರು ಎಂಬುದು ಈಗಾಗಲೇ ಜನಜನಿತವಾಗಿದ್ದು, ತಾಲ್ಲೂಕು ಕಛೇರಿ ಸಾಗರ ಇವರು ಈ ಸಂಬಂಧ ಯಾವುದೇ ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್‌ನ್ನು ನೀಡುತ್ತಿಲ್ಲ. ಈಗ ಇವರು ದಾಖಲಿಸಿರುವ ಅಟ್ರಾಸಿಟಿ ಪ್ರಕರಣದ ನಿಸ್ಸಕ್ತ ತನಿಖೆ ಮಾಡಿ ಅಲ್ಲದೇ ಜಮೀನಿನ ಮಾಲೀಕರು ದಾಖಲಿಸಿರುವ ಪ್ರಕರಣವನ್ನೂ ಸಹ ನಿಸ್ಪಕ್ಷ ತನಿಖೆ ಮಾಡಿ ಕ್ರಿಮಿನಲ್ ಅಂತಿಮ ಆರೋಪ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಇದನ್ನು ಸಂಪೂರ್ಣವಾಗಿ ಪರೀಶಿಲಿಸಿ .ತನಿಕೆ ನಡೆಸಬೇಕೆಂದು ಆಗ್ರಹಿಸಿದರು.


ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code