ಚಿಕ್ಕಮಗಳೂರುನ್ಯೂಸ್

ಕೋಟ ಶ್ರೀನಿವಾಸ್ ಪೂಜಾರಿಗೆ 25 ಸಾವಿರ ರೂ ದೇಣಿಗೆ ನೀಡಿದ್ದ ಚುರುಮುರಿ ವ್ಯಾಪಾರಿ.

ಕೋಟ ಶ್ರೀನಿವಾಸ್ ಪೂಜಾರಿಗೆ 25 ಸಾವಿರ ರೂ ದೇಣಿಗೆ ನೀಡಿದ್ದ ಚುರುಮುರಿ ವ್ಯಾಪಾರಿ.

(CHIKKAMAGALURU ):  ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಕೋಟ ಶ್ರೀನಿವಾಸ್ ಪೂಜಾರಿಗೆ ಚುನಾವಣಾ ಖರ್ಚಿಗೆಂದು 25,000 ಹಣ ನೀಡಿದ ಚುರುಮುರಿ ವ್ಯಾಪಾರಿ ಲೋಕೇಶ್ ಬಾಬು.

ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಹಣ ನೀಡಿದ ಲೋಕೇಶ್ ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು ಬಿಜೆಪಿ ಮತ್ತು ಕೋಟ ಶ್ರೀನಿವಾಸ್ ಅವರ ಅಭಿಮಾನಿಯಾಗಿದ್ದು ಇಂದು ಚುನಾವಣಾ ಪ್ರಚಾರಕ್ಕೆಂದು ಹೋದಾಗ ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ ಹಣ ನೀಡಿದ್ದರೆ.

ಚುನಾವಣೆ ಪ್ರಚಾರ ಆರಂಭಿಸಿದ್ದು ಇಂದು ಚಿಕ್ಕಮಗಳೂರು ನಗರದ ವಿವಿದೆಡೆ ಪ್ರಚಾರ ಮಾಡುತ್ತಿರುವ ಕೋಟಾ ಶ್ರೀನಿವಾಸ ಪೂಜಾರಿ ಹೆಚ್ಚು ಮತಗಳಿಂದ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ಶ್ರೀನಿವಾಸ್ ಪೂಜಾರಿ ಜೊತೆ ಚುನಾವಣಾ ಪ್ರಚಾರಕ್ಕೆಂದು ಸಿಟಿ ರವಿ ಸಹ ಜೊತೆಗೆದ್ದರು.

Leave a Reply

Your email address will not be published. Required fields are marked *

Scan the code