ವಿದ್ಯುತ್ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ತೆಂಗಿನ ಮರ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಬಸ್ ನಿಲ್ದಾಣದ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ತೆಂಗಿನ ಮರ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಜಯಪುರದ ಬಸ್ ನಿಲ್ದಾಣದ ಬಳಿ ಮನೆಯ ಎದುರುಗಡೆ ಇದ್ದ ತೆಂಗಿನ ಮರದ ಹೆಡ್ಲು ಕರೆಂಟ್ ಲೈನ್ ಗೆ ತಗುಲಿ ಶಾರ್ಟ್ ಸರ್ಕ್ಯೂಟ್ ನಿಂದ ಧಗಧಗಿಸಿ ಹೊತ್ತಿ ಉರಿದ ತೆಂಗಿನ ಮರ, ಕೆಲಕಾಲ ಬಸ್ ನಿಲ್ದಾಣದ ಎದುರು ಆತಂಕ ಸೃಷ್ಟಿಯಾಗಿತ್ತು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.