ಚಿಕ್ಕಮಗಳೂರುನ್ಯೂಸ್

PSI ನಿತ್ಯಾನಂದ ಗೌಡ ವಿರುದ್ಧ ಪತ್ನಿ ಯಿಂದಲೇ ದೂರು ದಾಖಲು. ಮಹಿಳೆಯರಿಗೆ ಮಂಚಕ್ಕೆ ಕರೆಯುವ ಪಿಎಸ್ಐ!!

PSI ನಿತ್ಯಾನಂದ ಗೌಡ ವಿರುದ್ಧ ಪತ್ನಿ ಯಿಂದಲೇ ದೂರು ದಾಖಲು. ಮಹಿಳೆಯರಿಗೆ ಮಂಚಕ್ಕೆ ಕರೆಯುವ ಪಿಎಸ್ಐ!!

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯ ಠಾಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತ್ಯಾನಂದ ಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕಳಸ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿಎಸ್ಐ ನಿತ್ಯಾನಂದ ಗೌಡ ರವರ ಕಿರುಕುಳ ತಾಳಲಾರದೆ ನಿತ್ಯಾನಂದ ಗೌಡ ರವರ ಪತ್ನಿ ಅಮಿತಾ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮಿತಾರವರ ಮೇಲೆ ಹಲ್ಲೆ, ಕೆನ್ನೆಗೆ ಹೊಡೆದು, ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದಿರುವ ಮತ್ತು 50 ಲಕ್ಷ ರೂಪಾಯಿಗಳಷ್ಟು ವರದಕ್ಷಿಣೆ ನೀಡಬೇಕು ಎಂದು ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಮಿತಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ನಿತ್ಯಾನಂದ ಗೌಡನ ತಂಗಿ ಮತ್ತು ತಂಗಿ ಗಂಡ ಕೂಡ ಅವ್ಯಾಚ್ಚ ಶಬ್ದಗಳಿಂದ ನನ್ನನ್ನು ನಿಂದಿಸಿರುತ್ತಾರೆ. ನಿತ್ಯಾನಂದ ಗೌಡ ಠಾಣೆಗೆ ದೂರು ಕೊಡಲು ಬರುವ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾನೆ. ಪಾಸ್ಪೋರ್ಟ್ ಮಾಡಲು ಬರುವ ಮಹಿಳೆಯರನ್ನು ಕೂಡ ಮಂಚಕ್ಕೆ ಕರೆಯುತ್ತಾನೆ. ಈತ ಕಾಪು ಠಾಣೆಯಲ್ಲಿ ಇರುವಾಗ ಓರ್ವ ಮುಸ್ಲಿಂ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ ನಾನು ಇತನ ರೂಂಗೆ ಎರಡು ಬಾರಿ ಹೋದಾಗ ಕಾಂಡಮ್ ಕೂಡ ಸಿಕ್ಕಿದೆ ಇದೇ ವಿಚಾರದಲ್ಲಿ ಕಾಪು ಠಾಣೆಯಲ್ಲಿ ಮುಸ್ಲಿಮರು ಈತನಿಗೆ ಹೊಡೆಯಲು ಹೋಗಿರುತ್ತಾರೆ ಅವತ್ತು ಎಸ್ಪಿ ಈತನನ್ನು ಬಚಾವ್ ಮಾಡಿರುತ್ತಾರೆ. ದೈಹಿಕವಾಗಿ ಬಳಸಿಕೊಂಡಿರುತ್ತಾನೆ. ಕೊನೆಗೆ ಆಯ್ಕೆ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಕೂಡ ಮಾಡಿರುತ್ತಾನೆ. ಆಕೆ ಡಿಎಆರ್ ಪೊಲೀಸರ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ.

ನಿತ್ಯಾನಂದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪ ವರಾಗಿದ್ದು ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಈಗ ಕಳಸ ಠಾಣೆಯಲ್ಲಿ ಠಾಣಧಿಕಾರಿಯಾಗಿದ್ದಾರೆ. ಪತ್ನಿಯೇ ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದು ಈ ಬಗ್ಗೆ ಇಲಾಖೆಯಲ್ಲಿ ಸೂಕ್ತ ತನಿಖೆ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪತಿ ಪತ್ನಿ ಇಬ್ಬರೂ ಸಹ ದೂರು ದಾಖಲಿಸಿದ್ದು ಕಳಸ ಠಾಣೆಯಲ್ಲಿ ಹೈಡ್ರಾಮವೇ ನಡೆಯುತ್ತಿದೆ.

Leave a Reply

Your email address will not be published. Required fields are marked *

Scan the code