ಸಂಪೂರ್ಣಾ ಹುಚ್ಚು ಹಿಡಿದ ಹೋರಿ ..ಗಾಬರಿಗೆ ಒಳಗಾದ ಸಾರ್ವಜನಿಕರು..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಕಡಬಗೆರೆಯಲ್ಲಿ ಹೋರಿಯೊಂದಕ್ಕೆ ಸಂಪೂರ್ಣ ಹುಚ್ಚು ಹಿಡಿದಿದ್ದು, ಹುಚ್ಚು ಹಿಡಿದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತಿತ್ತು.
ಇದನ್ನೂ ಕಂಡು ಸಾರ್ವಜನಿಕರೊಡನೆ ಸ್ವಯಂ ಸೇವಕರು ಸಹಾ ಹೋರಿಯನ್ನು ಹಿಡಿದು ಜೇನುಗದ್ದೆ ಪಶುಸಂಗೋಪಕ್ಕೆ ಒಪ್ಪಿಸಿದ್ದಾರೆ. ಪಶುಸಂಗೋಪನದ ಅಧಿಕಾರಿಗಳು ಅದಕ್ಕೆ ದಯಾ ಮರಣವನ್ನು ಪಾಲಿಸಿದ್ದು. ಹೋರಿಯನ್ನು ದೇವದಾನ ಗ್ರಾಮ ಪಂಚಾಯಿತಿ ವಾಹನದಲ್ಲಿ ಸಾಗಿಸಿ ಹೋರಿಯ ಶವವವನ್ನು ಉಪ್ಪು ಸುಣ್ಣ ಹಾಕಿ ಮಣ್ಣಿನಲ್ಲಿ ಹೂತುಹಾಕಲಾಗಿದೆ.
ಇದಕ್ಕೆ ಸಹಕಾರ ನೀಡಿದವರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶೀಲಾ ವಿಜಯ್. ಹರೀಶ್ ಕೊಟ್ಟಿಗೆಮನೆ. ರಶೀದ್, ಜಗ್ಗು ಹೆಗಡಪ್ಪ ಗೌಡ ಸ್ವಯಂ ಸೇವಕರಾದ ಸಂಜಿತ್ ಪೆರುಮಾಳ್. ಸಚಿನ್ ಗಿರೀಶ್ ಮಂಜು (ಬಂಗಾರಿ).
ಚಂದ್ರಶೇಖರ್ ರೈ. ಸಂಯೋಜಕ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕ ಧಾನ್ಯವಾದಗಳನ್ನು ಸಲ್ಲಿಸಿದ್ದಾರೆ.