ಜಿಲ್ಲೆನ್ಯೂಸ್

ರೈತ ಬಡವನಲ್ಲ ದೇಶಕ್ಕೆ ಅನ್ನ ನೀಡುವ ಶ್ರೀಮಂತ :ಲಕ್ಷ್ಮಣ್ ಎಲ್. ಎನ್

ರೈತ ಬಡವನಲ್ಲ ದೇಶಕ್ಕೆ ಅನ್ನ ನೀಡುವ ಶ್ರೀಮಂತ :ಲಕ್ಷ್ಮಣ್ ಎಲ್. ಎನ್

(KOLARA): ವಿಜ್ಞಾನ ತಂತ್ರಜ್ನ್ಯಾನ ಎಷ್ಟೇ ಬೆಳೆದರೂ ರೈತರು ಕೃಷಿ ಚಟುವಟಿಗಳನ್ನು ಸ್ಥಗಿತ ಗೊಳಿಸಿದರೆ ಇಡೀ ವಿಶ್ವವೇ ಹಸಿವಿನ ಅಕ್ರಂದನದಲ್ಲಿ ಮುಳುಗಬೇಕಾಗುತ್ತದೆ, ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೋ ದೇಶದ ಜನತೆಯ ಹಸಿವು ನೀಗಿಸುವ ಅನ್ನದಾತ ಅಷ್ಟೇ ಮುಖ್ಯ ಎಂದು ರತ್ನ ಭಾರತ ರೈತ ಸಮಾಜ ರಾಜ್ಯಾಧ್ಯಕ್ಷ ಲಕ್ಷ್ಮಣ್ ಎಲ್ ಎನ್ ಅಭಿಪ್ರಾಯಪಟ್ಟರು.


ಬಂಗಾರಪೇಟೆ: ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ರತ್ನ ಭಾರತ ರೈತ ಸಮಾಜ ಕರ್ನಾಟಕ ರಾಜ್ಯ ಕೋಲಾರ ಜಿಲ್ಲಾ ಘಟಕದ ಸಹಯೋಗದಲ್ಲಿ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ರವರ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ಗ್ರಾಮೀಣ ಸಮೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದವರು ರೈತರು, ಇತ್ತೀಚಿನ ದಿನಗಳಲ್ಲಿ ರೈತರನ್ನು ನಮ್ಮ ನಾಳುವ ಸರ್ಕಾರಗಳು ಅಸಡೆ ಮನೋಭಾವದಿಂದ ನೋಡುತ್ತಿರುವುದು ಸಮಂಜಸವಲ್ಲ, ಜನಪ್ರತಿನಿಧಿಗಳು ರೈತರ ಬಗ್ಗೆ ಕೇವಲ ಭಾಷಣಗಳಲ್ಲಿ ಮಾತನಾಡುವುದನ್ನು ಬಿಟ್ಟು ನೈಜ್ಯ ಸಮಸ್ಯೆಗಳನ್ನು ಅರಿತು ಅವುಗಳಿಗೆ ಸಮರ್ಪಕವಾದ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಬೇಕು ದೇಶದಲ್ಲಿ ಶೇಕಡ 60% ಜನರು ರೈತಾಪಿ ವರ್ಗದವರಾಗಿದ್ದು, ದೇಶದ ಆರ್ಥಿಕತೆಗೆ ಬಹುಪಾಲು ಕೊಡುಗೆಯನ್ನು ನೀಡುತ್ತಿದ್ದಾರೆ, ಇಂತಹ ರೈತ ಸಮುದಾಯ ಆತ್ಮಹತ್ಯೆಗಳಂತಹ ಅವಘಡಗಳನ್ನು ಅನುಭವಿಸುತ್ತಿರುವುದು ಇಡೀ ನಾಗರಿಕ ಸಮುದಾಯ ಅಂತಕದಲ್ಲಿ ಮುಳುಗಿದೆ,
ಸರ್ಕಾರ ವಾಣಿಜ್ಯೋದ್ಯಮಿಗಳಿಗೆ ಐಟಿ – ಬಿಟಿ ಕಂಪನಿಗಳಿಗೆ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಉತ್ತೇಜನ ನೀಡುವುದನ್ನು ಬಿಟ್ಟು ರೈತರ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು ಹಾಗೂ ದಲ್ಲಾಳಿಗಳ ಕಾಟದಿಂದ ಮುಕ್ತಿಗೊಳಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಿ ಕೊಡಬೇಕು, ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರವನ್ನು ಸಕಾಲಕ್ಕೆ ಒದಗಿಸಬೇಕು ಅತಿವೃಷ್ಟಿ – ಅನಾವೃಷ್ಟಿ ಆದಲ್ಲಿ ಉತ್ತಮ ಬೆಂಬಲ ಬೆಲೆಯನ್ನು ನೀಡಬೇಕು ಆ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕು.


ರೈತ ಎಂದಾಕ್ಷಣ ಪ್ರತಿಯೊಬ್ಬರ ಪರಿಕಲ್ಪನೆಗೆ ಬರುವುದು ಬಡಕಲ ದೇಹ, ಹರಿದ ಅಂಗಿ, ಕಡು ಬಡತನ ಎಂದು ಚಿತ್ರಿಸಲಾಗುತ್ತಿದೆ. ವಾಸ್ತವಿಕವಾಗಿ ರೈತರು ಬಡವರಾಗಿದ್ದರು ಇಡೀ ದೇಶಕ್ಕೆ ಅನ್ನ ನೀಡುವ ಶ್ರೀಮಂತ ವರ್ಗದವರಾಗಿದ್ದಾರೆ. ಇಂದಿನ ಯುವ ಸಮುದಾಯ ರೈತರು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತಯ್ಯ, ಜಿಲ್ಲಾಧ್ಯಕ್ಷ ನಂದೀಶ್, ಹೈಕೋರ್ಟ್ ವಕೀಲ ಚಲಪತಿ, ಬೆಂಗಳೂರು ನಗರ ಅಧ್ಯಕ್ಷ ನಾಗರಾಜ್, ಗುಬ್ಬಿ ಜಿಲ್ಲಾಧ್ಯಕ್ಷ ವೆಂಕಟಸ್ವಾಮಿ, ತಾಲೂಕು ಅಧ್ಯಕ್ಷ ಸತ್ಯನಾರಾಯಣ, ರಾಜ್ಯ ಮುಖಂಡರಾದ ಸುಧಾಕರ್, ವೆಂಕಟಸ್ವಾಮಿ, ರೂಪಾ, ರವಿಕುಮಾರ್, ದಲಿತ ಮುಖಂಡರಾದ ಹುಣಸನಹಳ್ಳಿ ವೆಂಕಟೇಶ್, ಸೂಲಿಕುಂಟೆ ಆನಂದ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code