ಸಾಲದ ಬಾಧೆ ತೀರಸಲಾಗದೆ ಸಾವಿಗೆ ಶರಣದ ರೈತ…!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ N. R ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವಗ್ಗಡೆಯ ಮುಳುವಳ್ಳಿ ಎಂಬಲ್ಲಿ ರೈತ ನೊಬ್ಬನು ಸಾಲ ತೀರಿಸಲಾಗದೆ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಮೃತ ರೈತ ವೆಂಕಟೇಶ್ (50) ಜಮೀನಿನ ನಿರ್ವಹಣೆಗಾಗಿ ಎನ್. ಆರ್. ಪುರ ಯೂನಿಯನ್ ಬ್ಯಾಂಕ್ನಲ್ಲಿ 3.00 ಲಕ್ಷ ಕೆನರಾ ಬ್ಯಾಂಕಿನಲ್ಲಿ 1.50 ಲಕ್ಷ, ಕಾನೂರು ಸೊಸೈಟಿಯಲ್ಲಿ ಸುಮಾರು ಒಂದು ಲಕ್ಷ, ಧರ್ಮಸ್ಥಳ ಸಂಘದಲ್ಲಿ 3.50 ಲಕ್ಷ, ಕೊಪ್ಪ ಸಮಸ್ತ ಸಂಘದಲ್ಲಿ 50 ಸಾವಿರ, ಮುತ್ತೋಟ್ ಫೈನಾನ್ನಲ್ಲಿ ಗೋಲ್ಡ್ ಲೋನ್ 1 ಲಕ್ಷ ಮತ್ತು ಇತರೆ ಕೈಸಾಲ ಮಾಡಿಕೊಂಡಿದ್ದರು ಎಂದು ಮೃತನ ಪುತ್ರ ಲತೇಶ್ (25) ತಿಳಿಸಿದ್ದಾರೆ. ಹಾಗು ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದೆ, ಮಾಡಿದ ಸಾಲವನ್ನು ತೀರಿಸಲಾಗದೆ, ಜೀವನದಲ್ಲಿ ಸೋತುಹೋಗಿದ್ದರು.
ತಂದೆ ಕಳೆನಾಶಕ ಸೇವಿಸಿ ವಾಂತಿ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದು. ತಕ್ಷಣ ತಂದೆಯವರನ್ನು ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಗು ದೂರಿನಲ್ಲಿ ವೆಂಕಟೇಶ್ ಅವರು ವಗ್ಗಡೆ ಗ್ರಾಮ ಸ. ನಂ. 94 ರಲ್ಲಿ 0.36 ಗುಂಟೆ, ಹಾಗೂ ಸ. ನಂ. 48 ರಲ್ಲಿ 1.20 ಎಕರೆ ಒತ್ತುವರಿ ಜಮೀನು ಹೊಂದಿರುತಾರೆ .ಹಾ ಗು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದಿದ್ದಾರೆ. ರೈತ ವೆಂಕಟೇಶ್ ಮಾಡಿದ ಸಾಲವನ್ನು ತೀರಸಲಾಗದೆ ಸಾವಿಗೆ ಶರಣಾಗಿರುತ್ತಾರೆ