ಅಭಿನಂದನಾ ಸಮಾರಂಭ ಹಾಗೂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನರ್ತನ ಸಂಜೆ ಕಾರ್ಯಕ್ರಮ
(SHIVAMOGA): ಸೊರಬ- ತಾಲೂಕಿನ ಆನವಟ್ಟಿಯ ಶ್ರೀ ಬಾಲಾಜಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಡಿ.17 ರ ಭಾನುವಾರ ಸಂಜೆ 6 ಗಂಟೆ ನೃಪತುಂಗ ವಿದ್ಯಾಶಾಲೆಯ ಆವರಣದಲ್ಲಿ ಅಭಿನಂದನಾ ಸಮಾರಂಭ ಹಾಗೂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನರ್ತನ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯ ಶಾಲೆಯ ಮುಖ್ಯಸ್ಥೆ ಶಿಲ್ಪ ಅನೂಪ್ ತಿಳಿಸಿದ್ದಾರೆ.
ಡಾ.ಮಹಾಂತ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಇಒ ಟಿ.ಎಂ ಸತ್ಯನಾರಾಯಣ, ಸಮಯ್ವನಾಧಿಕಾರಿ ದಯಾನಂದ ಕಲ್ಲೇರ, ಪಿ.ಎಸ್.ಐ ರಾಜು ರೆಡ್ಡಿ, ಜಿಪಂ ಮಾಜಿ ಸದಸ್ಯ ಎ.ಎಲ್. ಅರವಿಂದ ವಾಸವಿ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ, ಹಿರಿಯ ಮುಖಂಡ ಜರ್ಮಲೆ ಚಂದ್ರಶೇಖರ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದ್ದಾರೆ.
ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಕೆ.ಶ್ರೀಪತಿ ಹಳಗುಂದ ಅವರಿಂದ ಉಪನ್ಯಾಸ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಸೂತಿ ಮತ್ತು ಸ್ತ್ರೀ
ರೋಗ ತಜ್ಞೆ ಸುಪ್ರಿಯಾ ಹಾಗೂ ಅಂತರಾಷ್ಟ್ರೀಯ ಯೋಗಪಟು ತನ್ವಿತಾ ವಿ.ಸಾಗರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂದೀಪ ಯು.ಎಲ್ ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ