ಜಿಲ್ಲೆನ್ಯೂಸ್

ಶಾಸಕ ಎಸ್ ಎನ್ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಅಧಿಕಾರ ಸ್ವೀಕರ ಅಭಿಮಾನಿಗಳಿಂದ ಭರ್ಜರಿ ರೋಡ್ ಶೋ

ಶಾಸಕ ಎಸ್ ಎನ್ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಅಧಿಕಾರ ಸ್ವೀಕರ ಅಭಿಮಾನಿಗಳಿಂದ ಭರ್ಜರಿ ರೋಡ್ ಶೋ

(KOLARA): ಬಂಗಾರಪೇಟೆ :ಶಾಸಕ ಎಸ್ಎನ್ ನಾರಾಯಣಸ್ವಾಮಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಅಧಿಕಾರ ಸ್ವೀಕರಿಸಿದ್ದ ಹಿನ್ನೆಲೆ ರಾತ್ರಿ ಪಟ್ಟಣದ ನಂದಿ ಮೆಡಿಕಲ್ ವೃತ್ತದಿಂದ ಕುವೆಂಪು ವೃತ್ತದವರೆಗೂ ಶಾಸಕರ ಅಭಿಮಾನಿಗಳು ಪಟಾಕಿ ಸಿಡಿಸಿ ಭರ್ಜರಿ ರೋಡ್ ಶೋ ನಡೆಸಿ ಸಿಹಿ ಹಂಚಿದರು .

ಈ ವೇಳೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಮಾತನಾಡಿ,
ಕರ್ನಾಟಕ ರಾಜ್ಯದಲ್ಲಿ ನಗರಗಳನ್ನು ಅಭಿವೃದ್ಧಿ ಮಾಡಲು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಉತ್ತಮವಾದ ಸ್ಥಾನವನ್ನು ಸರ್ಕಾರ ಕಲ್ಪಿಸಿದೆ ಎಂದರು.

ಕಾಂಗ್ರೆಸ್ನ ರಾಷ್ಟ್ರ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಸ್ತುವಾರಿ ಸಚಿವರಾದ ಸುರೇಶ್ ರವರ ಆಶೀರ್ವಾದದೊಂದಿಗೆ ಉನ್ನತ ಮಟ್ಟದ ಅಧಿಕಾರ ಸಿಕ್ಕಿದೆ ಅದಕ್ಕಾಗಿ ಇವರೆಲ್ಲರಿಗೂ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.



ಬಂಗಾರಪೇಟೆ ಮತ್ತು ಜಿಲ್ಲೆಯ ಕೋಲಾರ ಮತ್ತು ಮುಳಬಾಗಿಲು,ಮಾಲೂರು, ಕೆಜಿಎಫ್ ಒಳಗೊಂಡಂತೆ ಎಲ್ಲಾ ನಗರಗಳನ್ನು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಗಮನವನ್ನು ಹರಿಸುತ್ತೇನೆ.ಈ ಜಿಲ್ಲೆ ನನ್ನ ತವರಿನ ಜಿಲ್ಲೆ ಕೇಂದ್ರ ಸರ್ಕಾರದ ಯೋಜನೆ ಯಾಗಿರುವ ಅಮೃತ್ ಸಿಟಿ, ಟೌನ್ ಶಿಪ್, ಹಾಗೂ ಇನ್ನೂ ಅನೇಕ ಯೋಜನೆಗಳನ್ನು ಕರ್ನಾಟಕ ರಾಜ್ಯದ ಯೋಜನೆಗಳನ್ನು ಒಳಗೊಂಡಂತೆ ಬೆಂಗಳೂರು, ಉಡುಪಿ, ಮಂಗಳೂರು,ಮೈಸೂರು, ಹುಬ್ಬಳ್ಳಿ, ಹೀಗೆ ಎಲ್ಲಾ ಭಾಗದಲ್ಲೂ ಸಹ ಅಮೃತ್ ಸಿಟಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಇಲಾಖೆ ವತಿಯಿಂದ ಅನೇಕ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುವುದೆಂದು ತಿಳಿಸಿದರು.

ಪುರಸಭೆಗಳಿಗೂ ಸಹ ಹಣಕಾಸಿನ ಯೋಜನೆಗಳನ್ನು ಮಾಡಿಕೊಡಲಾಗುವುದು ಒಟ್ಟಾರೆಯಾಗಿ ನಗರಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರನ್ನೇ ಆದರೂ ಸಹ ಅಭ್ಯರ್ಥಿಯಾಗಿ ಕೊಟ್ಟರು. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಭ್ರಷ್ಟ ಬಿಜೆಪಿ ಸರ್ಕಾರ ಹಾಗೂ ಮಾತು ತಪ್ಪಿದ ಈ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತೇವೆ. ಈ ಜಿಲ್ಲೆಯಲ್ಲಿ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಇಲ್ಲದೆ ಶೂನ್ಯವಾಗಿದೆ. ಕೇವಲ ಭಾಷಣಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವವರನ್ನು ಈ ಜಿಲ್ಲೆಯಿಂದ ಸೋಲಿಸಿ ಕಳಿಸುತ್ತೇವೆ ಎಂದರು.

ಬಿಜೆಪಿ ಪಕ್ಷ ಕೇವಲ ಧಾರ್ಮಿಕ ಭಾವನೆಯನ್ನು ಇಟ್ಟುಕೊಂಡು ಗೆಲ್ಲುತ್ತೇವೆ ಅನ್ನುವುದು ಭ್ರಮೆ, ಹತ್ತು ವರ್ಷಗಳಲ್ಲಿ ಮೋದಿ ಮಾಡಿರುವುದು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ ಎಲ್ಲವೂ ಶೂನ್ಯ, ಯುವಕರಿಗೆ ಉದ್ಯೋಗ ನೀಡಲಿಲ್ಲ, ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ನೀಡಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ, ಸಬ್ಸಿಡಿ ನೀಡಲಿಲ್ಲ, ಗ್ಯಾಸ್ ಬೆಲೆ ಕಡಿಮೆ ಮಾಡಿಲ್ಲ, ಇದ್ಯಾವುದೂ ಮೋದಿ ಸರ್ಕಾರ ಮಾಡಲಿಲ್ಲ, ಕೇವಲ ದೇವರ ಹೆಸರು ಹೇಳಿಕೊಂಡು ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮ ಕೇವಲ ಮೋದಿ ಬಿಜೆಪಿ ಸರ್ಕಾರ ಸ್ವತ್ತಲ್ಲ ಇಡೀ ಭಾರತ ದೇಶದಲ್ಲಿ ಯಾರೆಲ್ಲಾ ವಾಸ ಮಾಡುತ್ತಿದ್ದಾರೋ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಎಲ್ಲರೂ ಸಹ ಶ್ರೀರಾಮನನ್ನು ಆರಾಧಿಸುತ್ತಾರೆ ಕೇವಲ ಬಿಜೆಪಿ ಸ್ವತ್ತಲ್ಲ ಇದು ಭಾರತ ದೇಶದ ಸ್ವತ್ತು ಎಂದು ಆರೋಪ ಮಾಡಿದರು.

ಬಿಜೆಪಿ ಸರ್ಕಾರ ಕೇವಲ ಗಿಮಿಕ್ ಮಾಡಲು ಹೊರಟಿದೆ. ಇವರ ಡೋಂಗಿ ಅವತಾರಗಳನ್ನು ಜನ ನಂಬುವುದಿಲ್ಲ, ಕಳೆದ ಬಾರಿ ಫುಲ್ ಮಾಮಾ ದಾಳಿ ಇಂದು ಜನರನ್ನು ನಂಬಿಸಿ ಆ ನೆಪದಲ್ಲಿ ಮತವನ್ನು ಪಡೆದುಕೊಂಡಿದ್ದೀರಿ, ಈ ಬಾರಿ ಶ್ರೀರಾಮನನ್ನು ತಂದು ಬೀದಿಗೆ ಬಿಡುತ್ತಿದ್ದೀರಿ ನಿಮ್ಮಾಟ ಇದ್ಯಾವುದೂ ನಡೆಯೋದಿಲ್ಲ ಜನರಿಗೆ ಎಲ್ಲವೂ ಗೊತ್ತಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಾರ್ಥಸಾರಥಿ, ಪಿಚ್ಚ ಹಳ್ಳಿ ಗೋವಿಂದರಾಜು, ಗೋಪಾಲ ರೆಡ್ಡಿ, ಚಂದು ಸುಹೇಲ್, ರಘುನಾಥ್, ಶ್ರೀನಿವಾಸ್ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.

ವರದಿ:ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code