ಜಿಲ್ಲೆನ್ಯೂಸ್

ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದ ಬೃಹತ್ ಗ್ರಂಥ: ರಶ್ಮಿ

ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದ ಬೃಹತ್ ಗ್ರಂಥ: ರಶ್ಮಿ


(KOLARA): ಜಾತಿ ಮತ್ತು ಮೌಡ್ಯಗಳ ಅಂಧಕಾರದಲ್ಲಿ ಮುಳುಗಿರುವ ಮಾನವ ಸಂಕುಲಕ್ಕೆ ಅರಿವನ್ನು ಮೂಡಿಸಿ ಜ್ಞಾನದ ಕ್ರಾಂತಿಯ ಕಹಳೆಯನ್ನು ಮೊಳಗಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯದ ಮಹಾನ್ ಗ್ರಂಥ ಸಂವಿಧಾನ ಎಂದು ತಹಶೀಲ್ದಾರ್ ರಶ್ಮಿ ಅಭಿಪ್ರಾಯಪಟ್ಟರು.

ಬಂಗಾರಪೇಟೆ: ಪಟ್ಟಣಕ್ಕೆ ಆಗಮಿಸಿದ “ಸಂವಿಧಾನ ಜಾಗೃತಿ ರಥವನ್ನು” ತಾಲೂಕಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ಎಂಬುದು ಕೇವಲ ಗ್ರಂಥವಲ್ಲ ಮಾನವನ ಸಂಕುಲದ ಬದುಕನ್ನು ರಕ್ಷಿಸುತ್ತಾ ಜನತೆಯ ಜೀವನವನ್ನು ಕಟ್ಟಿಕೊಳ್ಳುವ ಆಡಳಿತತ್ಮಕ ಕಾನೂನು, ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತಕ್ಕೆ ಬೃಹತ್ ಸಂವಿಧಾನವನ್ನು ರಚಿಸುವ ಮೂಲಕ ಜಾತಿ, ಮತ, ಲಿಂಗ, ತಾರತಮ್ಯಗಳನ್ನು ಹೋಗಲಾಡಿಸಿ ಶಿಕ್ಷಣದ ಮೂಲಕ ಸಮಾನತೆ, ಭಾತೃತ್ವ, ಜಾತ್ಯಾತೀತ ನೆಲೆಗಟ್ಟಿನಲ್ಲಿ ದೇಶದ ಪ್ರಜೆಗಳಿಗೆ ಬದುಕು ಕಲ್ಪಿಸಿಕೊಟ್ಟರು ಎಂದು ತಿಳಿಸಿದರು.



ಜೆ.ಡಿ. ಶ್ರೀನಿವಾಸ್ ಮಾತನಾಡಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗ್ರಂಥ ಸಂವಿಧಾನ, ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಸಂವಿಧಾನ ಜಾರಿಗೆ ಬಂದು 75ವರ್ಷಗಳ ಸುವರ್ಣ ಮಹೋತ್ಸವ ನಡೆಯುತ್ತಿದೆ. ಸಂವಿಧಾನ ಎಂಬುದು ಕೇವಲ ಒಂದು ವರ್ಗಕ್ಕೆ ಸೀಮಿತ ಎಂದು ಪ್ರತಿಬಿಂಬಿಸಲು ಹೋರಟಿರುವುದು ಸಮಂಜಸವಲ್ಲ, ಸಂವಿಧಾನ ಎಲ್ಲಾ ವರ್ಗದ ಸುಮುದಾಯಗಳ ಸಮಾನತೆಗಾಗಿ ರಚನೆಯಾಗಿದೆ ಎಂದರು.

ಮತ ಬ್ಯಾಂಕಿಗಾಗಿ ಜಾತ ಕಾರ್ಯಕ್ರಮ
ರೈತ ಮುಖಂಡ ರಾಜಪ್ಪ ಮಾತನಾಡಿ ರಾಜಕಾರಣಿಗಳು ಸಂವಿಧಾನದ ಆಶಯಗಳಿಗೆ ಬದ್ಧತೆಯಿಂದ ನಡೆದುಕೊಳ್ಳದೆ ಕೇವಲ ಚುನಾವಣೆ ಸಂದರ್ಭದಲ್ಲಿ ಮತ ಬ್ಯಾಂಕಿಗಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದ ವಿಶೇಷತೆ:
ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಥ ರಥಯಾತ್ರೆ ಗೆ ದಲಿತ ಮುಖಂಡರು ತಾಲೂಕು ಆಡಳಿತ ಸಹಯೋಗದೊಂದಿಗೆ ಹೂವಿನ ಸುರಿಮಳೆ ಗಳೊಂದಿಗೆ ತಮಟೆ ವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೊರಲಾಯಿತ್ತು, ಹಾಗೂ ಐನೋರಹೋಸಹಳ್ಳಿ, ಸೂಲಿಕುಂಟೆ ಮಾವಹಳ್ಳಿ ಗ್ರಾಂ,ಪಂ ಸಂಚರಿಸಿ ಇತ್ತು.



ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಪಿಡಬ್ಲ್ಯೂಡಿ ಅಧಿಕಾರಿ ರವಿ, ಪುರಸಭೆ ಸಿ ಓ ಮೀನಾಕ್ಷಿ, ಕೃಷಿ ಇಲಾಖೆ ಪ್ರತಿಭಾ, ಬಿಇಓ ಸುಕನ್ಯ, ಪೊಲೀಸ್ ನಿರೀಕ್ಷಕ ನಂಜಪ್ಪ, ಇ ಓ ರವಿಕುಮಾರ್, ಸಿಡಿಪಿಓ ಮುನಿರಾಜು , ಹಿಂದುಳಿದ ಕಲ್ಯಾಣ ದ ಇಲಾಖೆ ಅಧಿಕಾರಿ ಸಕ್ಪಾಲ್, ಜೆ,ಡಿ, ಶ್ರೀನಿವಾಸ್, ಅಧಿಕಾರಿಗಳಾದ ಅಜಯ್, ಪವನ್ ,ಅಜಿತ್, ರವಿಕುಮಾರ್, ದಲಿತ ಮುಖಂಡರುಗಳಾದ ಹುಣಸನಹಳ್ಳಿ ವೆಂಕಟೇಶ್, ಸೂಲಿಕುಂಟೆ ಆನಂದ್, ಯಲ್ಲಪ್ಪ,‌ ಸೂಲಿಕುಂಟೆ ರಮೇಶ್, ಗ್ರಾಂ,ಪಂ, ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಮನೋಜ್, ವೆಂಕಟೇಶ್ ರೆಡ್ಡಿ, ರಾಘವೇಂದ್ರ ಬಾಬು, ಸಿ. ಬಾಬು, ರಾಜಪ್ಪ, ಕವಿತಾ ವೆಂಕಟೇಶ್, ಪಿಡಿಓ ಯಶ್ವಂತ್. ಜಿ ವಿ ಕಾ ರಾಮಚಂದ್ರ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code