ದಕ್ಷಿಣಕನ್ನಡನ್ಯೂಸ್

ಅರ್ಧ ತಿಂದು ಬಿಟ್ಟ ಕರುವಿನ ದೇಹ ರಬ್ಬರ್ ಮರದಲ್ಲಿ ನೇತಾಡುತ್ತಿತ್ತು.

ಅರ್ಧ ತಿಂದು ಬಿಟ್ಟ ಕರುವಿನ ದೇಹ ರಬ್ಬರ್ ಮರದಲ್ಲಿ ನೇತಾಡುತ್ತಿತ್ತು.

(PUTTURU): ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಕಣಿಯಾರ್ಮಲೆ ರಕ್ಷಿತಾರಣ್ಯ ಸಮೀಪದ ಅತ್ರ್ಯಡ್ಕ ಎಂಬಲ್ಲಿರುವ ರಬ್ಬರ್ ಮರದ ಕೊಂಬೆಯ ನಡುವೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ದನದ ಕರುವಿನ ಅರ್ಧ ತಿಂದು ಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಚಿರತೆಯ ಕೃತ್ಯ ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತವಾಗಿದೆ. ದನದ ಕರುವನ್ನು ರಬ್ಬರ್ ಮರಕ್ಕೆ ಹೊತ್ತೊಯ್ದ ಕೊಂಬೆಗಳ ನಡುವಿನ ಭಾಗದಲ್ಲಿಟ್ಟ ಕಾಡು ಪ್ರಾಣಿ ಕರುವಿನ ಕೆಲವು ಭಾಗಗಳ ಮಾಂಸವನ್ನು ತಿಂದಿದೆ.

ಜಾಹೀರಾತು/advertisement

ದನದ ಕರು ನೇತಾಡುತ್ತಿರುವುದನ್ನು ಗಮನಿಸಿದ ರಬ್ಬರ್ ಟ್ಯಾಪಿಂಗ್ ಕೆಲಸಗಾರರು ರಬ್ಬರ್ ನಿಗಮದ ಕಾರ್ಯನಿರ್ವಹಣಾಧಿಕಾರಿಗೆ, ಅರಣ್ಯ ಇಲಾಖೆ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ನರಿಮೊಗರು ಉಪ ವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ, ಆನೆಗುಂಡಿ ಉಪವಲಯ ಅರಣ್ಯಾಧಿಕಾರಿ ಲೋಕೇಶ್, ಕೆಎಫ್‌ಡಿಸಿಯ ರೇಂಜರ್ ಪ್ರದೀಪ್ ರೈ, ಎಡಿಎಂ ಅರುಣ್, ಸಿಬ್ಬಂದಿ ದೀಪಕ್, ಚಿದಾನಂದ, ಶೀನಪ್ಪ ಪರಿಶೀಲನೆ ನಡೆಸಿ, ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಗ್ರಾಮ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಅರ್ಧ ತಿಂದು ಬಿಟ್ಟ ಕರುವಿನ ದೇಹವನ್ನು ದಫನ್ ಮಾಡಲಾಗಿದೆ.

Leave a Reply

Your email address will not be published. Required fields are marked *

Scan the code