ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಪ್ರಯುಕ್ತ ಬೃಹತ್ ರ್ಯಾಲಿ
(BENGALURU): ಬೆಂಗಳೂರು : ಮೇ 12 ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯ ಗೌರವಾರ್ಥವಾಗಿ ಮೇ 12 ರಂದು ಎವಿಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ರಾಜೀವ್ ರೈ ಮತ್ತು ಬ್ರೈಟ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಿ ಸಿ. ಪ್ರೊ.ವಿಜಿ ಸಿ ನೇತೃತ್ವದ ನರ್ಸಿಂಗ್ ಅಧ್ಯಾಪಕರ ಸಮನ್ವಯದೊಂದಿಗೆ ನಡೆದ ರ್ಯಾಲಿಯಲ್ಲಿ ಬ್ರೈಟ್ ಕಾಲೇಜ್ ಆಫ್ ನರ್ಸಿಂಗ್ನ ಕರ್ನಾಟಕ ಸ್ಟೂಡೆಂಟ್ ನರ್ಸ್ಗಳು ಸೇರಿದಂತೆ ಸುಮಾರು 2800 ಸ್ಟೂಡೆಂಟ್ಸ್ ಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಗೃಹ ಸಚಿವರು ಜಿ ಪರಮೇಶ್. ಹಾಗೂ ವಿಧಾನ ಪರಿಷತ್ ಸಭಾ ಅಧ್ಯಕ್ಷ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರತಿ ವರ್ಷ ಮೇ 12 ರಂದು ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ “ನಮ್ಮ ದಾದಿಯರು, ನಮ್ಮ ಭವಿಷ್ಯ : ಆರೈಕೆಯ ಆರ್ಥಿಕ ಶಕ್ತಿ.” ಮಾನವೀಯತೆಗೆ ಅವರ ನಿಸ್ವಾರ್ಥ ಮತ್ತು ಬೇಷರತ್ತಾದ ಸೇವೆಗಳಿಗಾಗಿ ಎಲ್ಲೆಡೆ ದಾದಿಯರನ್ನು ಗೌರವಿಸಲು ಮತ್ತು ಕೃತಜ್ಞತೆಯನ್ನು ತೋರಿಸುವ ಮಾರ್ಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಮತ್ತು ಎಲ್ಲಾ ದಾದಿಯರ ಸ್ಮರಣಾರ್ಥ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಸುಮಾರು 2800 ಸ್ಟೂಡೆಂಟ್ಸ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ತಮ್ಮ ಸೇವೆಯನ್ನು ನೀಡಿದರು ಮತ್ತು ಅವರ ಮಹತ್ವ ಮತ್ತು ಸಾಮಾಜಿಕ ಕೊಡುಗೆಯ ಬೆಳಕಿನಲ್ಲಿ ದಾದಿಯರು ನೀಡುವ ನಿಸ್ವಾರ್ಥ ಕಾಳಜಿಯನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಿದರು. ಅರಿವು ಮೂಡಿಸಿದರು.
ವರದಿ: ವಿಷ್ಣು ಕೋಲಾರ