ನ್ಯೂಸ್ಶಿವಮೊಗ್ಗ

ಅ. 21ರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

ಅ. 21ರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

(SHIVAMOGA): ಸಾಗರ ಜಿಲ್ಲೆಯ ವಿವಿಧ ಯೋಜನೆಯ ಮುಳುಗಡೆ ಸಂತ್ರಸ್ತರು ಹಾಗೂ ಭೂಹಕ್ಕು ವಂಚಿತರ ಹೋರಾಟಕ್ಕೆ ಸ್ಪಂದಿಸದೆ ಒಕ್ಕಲೆಬ್ಬಿಸುತ್ತಿರುವುದು ಹಾಗೂ ಕಳೆದ ಮಾರ್ಚಿನಲ್ಲಿ ಜಿಲ್ಲಾಧಿಕಾರಿಯವರು ವಿಶೇಷ ಕಾರ್ಯಕಪಡೆ ರಚಿಸುವಂತೆ ಮಾಡಿದ್ದ ಮನವಿಯನ್ನೂ ನಿರ್ಲಕ್ಷ್ಯ ಮಾಡಿರುವ ಸರಕಾರದ ವಿರುದ್ಧ ಅ. 21ರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಶಿವಮೊಗ್ಗ ಜಿಲ್ಲಾ ಮುಳುಗಡೆ ಸಂತ್ರಸ್ತರು ಹಾಗೂ ಭೂಹಕ್ಕು ವಂಚಿತರ ವೇದಿಕೆ ಬುಧವಾರ ತೀರ್ಮನಿಸಿದೆ.


ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ರೈತ ಭವನದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ತುಂಗಾ, ವರಾಹಿ, ಚಕ್ರ, ಶರಾವತಿ, ಸಾವೆಹಕ್ಲು, ಮಾಣಿ ಮೊದಲಾದ ಆಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಜನ ನೆಲೆ ಕಳೆದುಕೊಂಡು ಅನಾಥರಂತೆ ಬದುಕುತ್ತಿದ್ದಾರೆ. ಈವರೆಗೂ ಸರಕಾರದಿಂದ ನ್ಯಾಯ ಸಿಕ್ಕಿಲ್ಲ. ಸ್ವಯಂ ಪುನರ್ವಸತಿ ಕಂಡುಕೊಂಡು ಜೀವನ ಸಾಗಿಸುತ್ತಿರುವವರ ವಿರುದ್ಧ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯು ಅಭಯಾರಣ್ಯ, ಪರಿಭಾವಿತ ಅರಣ್ಯ, ರಾಜ್ಯ ಅರಣ್ಯ, ಸೂಚಿತ ಅರಣ್ಯ ಎಂದೆಲ್ಲಾ ಅಧಿಸೂಚನೆ ಹೊರಡಿಸಿ, ಕಾನೂನು ಕ್ರಮದ ಮೂಲಕ ಹಿಂಸಿಸಲಾಗುತ್ತದೆ. ಇದು ಅಕ್ಷಮ್ಯ ಎಂದು ಮಾತು ಕೇಳಿಬಂದವು.
ಪರಿಸರವಾದಿಗಳು ಕಾನೂನು ಉಲ್ಲೇಖಿಸಿ ನ್ಯಾಯಾಲಯಗಳಲ್ಲಿ ಸರಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿವೆ. ಕಂದಾಯ ಇಲಾಖೆ ಮೌನವಾಗಿದ್ದು, ಅರಣ್ಯ ಇಲಾಖೆ ರೈತರಿಗೆ ತೊಂದರೆ ಕೊಡುತ್ತಿದೆ. ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆ ನಿರಂತರವಾಗಿ ಮುಳಗುಡೆ ಸಂತ್ರಸ್ತರ ವಿರುದ್ಧ ನಿಂತಿದ್ದರೆ, ರಾಜ್ಯ ಸರಕಾರವು ನ್ಯಾಯಾಲಯದ ಆದೇಶದ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಸಭೆಯಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು.


ಸರಕಾರವು ವಿಶೇಷ ಕಾರ್ಯಪಡೆ ರಚಿಸಿ, ವರದಿ ಪಡೆದು ಪರಿಹಾರ ಕ್ರಮ ಕೈಗೊಳ್ಳುವವರೆಗೆ ಅರಣ್ಯ ಇಲಾಖೆಯು ಅತಿಕ್ರಮಣ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸಭೆ ಕರೆದು ಮುಕ್ತ ಚರ್ಚೆ ನಡೆಸಬೇಕು. ಜಿಲ್ಲಾಧಿಕಾರಿಯವರು ನೀಡಿದ್ದ ವಿಶೇಷ ಕಾರ್ಯಕಪಡೆ ರಚಿಸುವ ಸಲಹೆಯನ್ನು ಸರಕಾರ ನಿರ್ಲಕ್ಷಿಸಿದೆ. ಕೂಡಲೇ ಇದನ್ನು ಸರಿಪಡಿಸುವ ಕ್ರಮವಾಗದಿದ್ದರೆ ರೈತ ಸಂಘವು ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು.
ವೇದಿಕೆ ಸಂಯುಕ್ತ ಅಧ್ಯಕ್ಷ ದಿನೇಶ್ ಶಿರವಾಳ, ಅಧ್ಯಕ್ಷ ವಿ.ಜಿ.ಶ್ರೀಕರ, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಹೊಯ್ಸಳ ಗಣಪತಿಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code