ಕಾರ್ಮಿಕ ನೊಬ್ಬ ಕಟ್ಟಡ ಮೇಲಿಂದ ಬಿದ್ದು ಸ್ಥಳದಲ್ಲೆ ಸಾವು.
(KOLARA): ಬಂಗಾರಪೇಟೆ :ಪಟ್ಟಣದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಂಗ ಸಂಸ್ಥೆಯ ಕೇಂದ್ರದ ಆವರಣದಲ್ಲಿ ಕಾರ್ಮಿಕ ನೊಬ್ಬ ಕಟ್ಟಡ ಮೇಲಿಂದ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ.
ಮೃತದುರ್ದೈವಿ ನಾರಾಯಣಸ್ವಾಮಿ 35 ವರ್ಷ ಎಂದು ತಿಳಿದು ಬಂದಿದೆ. ಮೂಲತಹ ಕೆಜಿಎಫ್ ತಾಲೂಕಿನ ಘಟ್ಟ ಮಾದಮಂಗಲ ಗ್ರಾಮದವರೆಂದು ತಿಳಿದು ಬಂದಿದೆ. ಇಂದು ಮುಂಜಾನೆ ಕೆಲಸಕ್ಕೆಂದು ಪಟ್ಟಣದ ಉಗ್ರಾಣ ಕೇಂದ್ರಕ್ಕೆ ಬಂದಿರುತ್ತಾರೆ ಎಂದು ತಿಳಿದು ಬಂದಿದೆ.
ಉಗ್ರಾಣ ಕೇಂದ್ರದ ಕಟ್ಟಡದಮೇಲೆ ಶೀಟ್ ಗಳನ್ನು ಬದಲಾಯಿಸಲು ಹೋದ ಸಂದರ್ಭದಲ್ಲಿ ಶೀಟ್ ಗಳು ಮುರಿದು ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾದ ಗಾಯಗಳಾದ ಹಿನ್ನೆಲೆ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಉಗ್ರಾಣ ನಿಗಮದ ಜನರಲ್ ಮ್ಯಾನೇಜರ್ ಕುಮಾರ್ ರವರು ಭೇಟಿಕೊಟ್ಟು ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.ತಕ್ಷಣ ಈಗ ಒಂದು ಲಕ್ಷ ನೀಡುತ್ತೇವೆ ಇನ್ನು ಎರಡು ದಿನಗಳ ಒಳಗೆ 4 ಲಕ್ಷ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.