ಕೊಡಗುನ್ಯೂಸ್

ಲಾರಿ ಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ.

ಲಾರಿ ಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ.


(MADIKEERI): ಬೆಂಗಳೂರಿನಿಂದ ಮಡಿಕೇರಿಗೆ ಕುಟುಂಬವೊಂದು ಕಾರಿನಲ್ಲಿ ತೆರಳುತ್ತಿದ್ದ ಸಂಧರ್ಭ ಇಬ್ಬನಿ ರೆಸಾರ್ಟ್ ಬಳಿ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಆಗಿದ್ದು ಯಾವುದೇ ಪ್ರಾಣ ಹಾನಿ ಆಗಿಲ್ಲ.

ಇದೇ ಸಂಧರ್ಭ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ. ಕಿರಣ್ ಕುಮಾರ್ ಅವರು ಸದರಿ ಸ್ಥಳದಲ್ಲಿ ಮಡಿಕೇರಿ ಕಡೆಗೆ ತೆರಳುತ್ತಿದ್ದು. ಆ ಅಪಘಾತವನ್ನು ಕಂಡು ತಕ್ಷಣ ಅವರನ್ನು ಕಾರಿನಿಂದ ಹೊರತೆಗೆದು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೊಂಡೋಯ್ಯುವಲ್ಲಿ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಕಾರಿನಲ್ಲಿದ್ದ ವೃದ್ದೆ, ಗಂಡ ಹೆಂಡತಿ ಮತ್ತು 2 ಪುಟ್ಟ ಮಕ್ಕಳಿಗೆ ಅಪಘಾತ ಪರಿಣಾಮ ಅಲ್ಪ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

Scan the code