ಕ್ರೈಂ ನ್ಯೂಸ್ಚಿಕ್ಕಮಗಳೂರು

ಹಲಸಿನ ಹಣ್ಣಿನ ಆಸೆಯಿಂದ ಕುಯ್ಯಲು ಹೋದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಸಾವು.

ಹಲಸಿನ ಹಣ್ಣಿನ ಆಸೆಯಿಂದ ಕುಯ್ಯಲು ಹೋದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಸಾವು.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದ ಬಳಿ ಹಲಸಿನ ಹಣ್ಣು ಕುಯ್ಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಲಸಿನ ಹಣ್ಣು ಕುಯ್ಯಲು ಹೋಗಿದ್ದ ವ್ಯಕ್ತಿ ಅಲ್ಯುಮಿನಿಯಂ  ಏಣಿ ಏರಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲಸಿನ ಹಣ್ಣು ಸೀಸನ್ ಆಗಿರುವುದರಿಂದ ಆಸೆಯಿಂದ ಹಲಸಿನ ಹಣ್ಣನ್ನು ಕುಯ್ಯಲು ಹೋದ ವ್ಯಕ್ತಿ ಸಾವನ್ನಪ್ಪಿದ್ದು ವಿಜಯ್ ಗೌಡ (56) ಮೃತ ದುರ್ದೈವಿ. ಮೃತ ಸ್ಥಳದಲ್ಲೆ ಸಾವನ್ನಪ್ಪಿದ್ದು ಮೃತರ ದೇಹ ಬಹುತೇಕ ಭಾಗಗಳು ಬೆಂಕಿಗೆ ಸುಟ್ಟು ಹೋಗಿದೆ. ದೇಹ ಸುಟ್ಟ ಬೆಂಕಿಯಿಂದ ಹೊಗೆ ಬರುವುದನ್ನು ಗಮನಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು. ಈ ಘಟನೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಮೃತರ ಪತ್ನಿ ಪ್ರಮೀಳಾ ದೂರು ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

Scan the code