ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣ, ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು.
(KOLARA): ಬಂಗಾರಪೇಟೆ: ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯಿರುವ ಡಾಃಅಂಬೇಡ್ಕರ್ ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತೆಯನ್ನು ಕಾಪಾಡದೆ ಕಡೆಗಣಿಸಿರುವುದರಿಂದ ಅವ್ಯವಸ್ಥೆಯಿಂದ ಕೂಡಿದ್ದು ಹಾಗೂ ರಾತ್ರಿಯ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ, ಇಲಾಖೆ ಕೂಡಲೇ ಪ್ರತಿಮೆ ಸುತ್ತಲೂ ಸ್ವಚ್ಚತೆಗೊಳಿಸಿ ನೈರ್ಮಲ್ಯವನ್ನು ಕಾಪಾಡಬೇಕೆಂದು ಒತ್ತಾಯಿಸಿ ದಲಿತ ಸಮಾಜಸೇನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಎದುರು ಸಾಂಕೇತಿಕವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಧ್ಯಕ್ಷ ಸೂಲಿಕುಂಟೆ ಆನಂದ್ ಕಳೆದ 8ವರ್ಷಗಳ ಹಿಂದೆ ಸಂಘಟನೆ ಹೋರಾಟಕ್ಕೆ ಮಣಿದು ವಿರೂಪಗೊಂಡಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸಿದರು. ಆದರೆ ಈಗ ಪ್ರತಿಮೆ ಸುತ್ತಲು ಸ್ವಚ್ಚತೆ ಇಲ್ಲದೆ ಪುಂಡ ಪೋಕರಿಗಳ ಅಡ್ಡವಾಗಿ ಮಾರ್ಪಟ್ಟು ಸುತ್ತಲೂ ಮಲ ಮೂತ್ರ ವಿಸರ್ಜನೆಯ ಕೇಂದ್ರವಾಗಿ ಬದಲಾಗಿಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಗಮನಹರಿಸದೆ ಕಡೆಗಣಿಸಿಲಾಗಿದೆ. ಈ ಕೂಡಲೆ ಅಧಿಕಾರಿಗಳು ಪ್ರತಿಮೆ ಸುತ್ತಲು ಸ್ವಚ್ಚತೆ ಕಾಪಾಡಿ ಪೋಕರಿಗಳು ಪ್ರತಿಮೆ ಬಳಿ ನುಸಳದಂತೆ ರಕ್ಷಣೆ ಕಲ್ಪಿಸಬೇಕುಎಂದು ಆಗ್ರಹಿಸಿದರು.
ಇಲ್ಲಿನರೈಲ್ವೆ ನಿಲ್ದಾಣ ಬೆಂಗಳೂರು ಬಿಟ್ಟರೆಅತಿ ಹೆಚ್ಚಿನ ಆದಾಯವನ್ನು ಇಲಾಖೆಗೆ ಬರುವ ನಿಲ್ದಾಣವಾಗಿದೆ, ಆದರೆ ಇಲ್ಲಿ ನಾಗರೀಕ ಸೌಲಭ್ಯಗಳಿಂದ ವಂಚಿತವಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಮುಂದಾಗಬೇಕೆoದರು.
ನಿಲ್ದಾಣದ ಒಳಗೆ ಕ್ಯಾಂಟೀನ್ ಇದ್ದರೂ ಅಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ, ಇದರಿಂದ ಪ್ರಯಾಣಿಕರು ತಿಂಡಿಗಾಗಿ ಪರಾಡುವಂತಾಗಿದೆ. ನಿತ್ಯ 25ಸಾವಿರ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಮಾಡುವರು, ಆದರೆ ತುರ್ತುಗಾಗಿ ಔಷಧಿಗಳನ್ನು ಪಡೆಯಲು ಔಷಧಿ ಮಳಿಗೆ ಇಲ್ಲ, ಕುಡಿಯಲು ಶುದ್ದವಾದ ನೀರಿಲ್ಲ, ಮುಖ್ಯವಾಗಿ ಶೌಚಾಲಯವಿಲ್ಲ, ಹಣಡ್ರಾ ಮಾಡಲು ಎಟಿಎಂ ಇಲ್ಲದೆ ಪ್ರತಿಯೊಂದಕ್ಕೂ ನಿಲ್ದಾಣದಿಂದ ಅರ್ಧ ಕಿ.ಮೀ ಕ್ರಮಿಸಿ ಪಡೆಯುವಂತಾಗಿದೆ ಎಂದು ಆರೋಪಿಸಿದರು. ಆದ್ದರಿಂದ ಇಲಾಖೆ ಅಧಿಕಾರಿಗಳು ಕೂಡಲೇ ನಮ್ಮ ಬೇಡಿಕೆಗಳನ್ನು ಪ್ರಯಾಣಿಕರ ಹಿತದೃಷಿಯಿಂದ ತ್ವರಿತವಾಗಿ ಈಡೇರಿಸಬೇಕು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗೌತಮ್, ಅಯ್ಯಪ್ಪ, ಅರ್ಜುನ್, ಕರುಣ, ಸುಭ್ರಮಣಿ, ಪ್ರದೀಪ್, ಅಮುಲ್, ಆಟೋ ರಾಜ ಮತ್ತಿತರರು ಇದ್ದರು.
ವರದಿ: ವಿಷ್ಣು ಕೋಲಾರ