ಜಿಲ್ಲೆನ್ಯೂಸ್

ಅರಣ್ಯ ಇಲಾಖೆಯವರು ನೆಟ್ಟರೆ ಮಾತ್ರ ಗಿಡ, ರೈತರು ನೆಟ್ಟರೆ ಗಿಡವಲ್ಲ: ನಾಗೇಶ್

ಅರಣ್ಯ ಇಲಾಖೆಯವರು ನೆಟ್ಟರೆ ಮಾತ್ರ ಗಿಡ, ರೈತರು ನೆಟ್ಟರೆ ಗಿಡವಲ್ಲ: ನಾಗೇಶ್

(CHIKKAMAGALURU) : ಪರಿಸರ ಹಾಗೂ ಮಲೆನಾಡು ಉಳಿಸುವ ಉದ್ದೇಶದಿಂದ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ರಚನೆ ಕೈಗೊಳ್ಳುವ ಬಗ್ಗೆ ಬಾಳೆಹೊನ್ನೂರಿನಲ್ಲಿ ಫೆ. 4ನೇ ತಾರೀಕು ಸಭೆ ಸೇರಿದ್ದು ಇಂದು ಸುದ್ದಿಗೋಷ್ಠಿ ಕರೆದು ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾಗಿರುವ ಬಗ್ಗೆ ತಿಳಿಸಿದರು.

ಅರಣ್ಯ ಇಲಾಖೆಯ ಕಾಯ್ದೆ , ಅಧಿಕಾರಿಗಳ ದೌರ್ಜನ್ಯ ಈ ಹಿಂದೆ ನಾಗರಿಕ ಹಿತ ರಕ್ಷಣಾ ಸಮಿತಿಯು ಹೋರಾಟ ಮಾಡಿದ್ದು, ಆ ಸಂದರ್ಭದಲ್ಲಿ ಸಡಿಲಿಕೆಗೊಳಿಸಿ ಆಶ್ವಾಸನೆ ಇಟ್ಟಿದ್ದರು. ಪುನಹ ಇಲ್ಲಸಲ್ಲದ ಕಾನೂನು ಹಾಗೂ ದೌರ್ಜನ್ಯಗಳು ನಡೆಸುತ್ತಿದ್ದಾರೆ ಹಾಗೂ ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಕೂಡ ಜೊತೆ ಜೊತೆಗೆ ಆನೆಗಳ ಹಾವಳಿ ಕೂಡ ಹೆಚ್ಚಾಗಿದೆ. ರೈತರು, ನಾಗರಿಕರು, ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಜೀವನ ಮಾಡುವಂತಾಗಿದೆ.

ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಶಾಶ್ವತ ಪರಿಹಾರಕ್ಕಾಗಿ ವೈಲ್ಡ್ ಲೈಫ್ ಅರಣ್ಯಕ್ಕೆ ಆನೆಗಳು ಹಾಗೂ ಪ್ರಾಣಿಗಳನ್ನು ಓಡಿಸಿ ರೈಲ್ವೆ ಬೇಲಿಯನ್ನು ನಿರ್ಮಿಸಬೇಕು. ಹಾಗೂ ಟಾಸ್ಕ್ ಫೋರ್ಸ್ ರಚನೆಗೊಳಿಸಿ ಪ್ರಾಣಿಗಳ ಹಾವಳಿಗಳನ್ನು ತಡೆಯಬೇಕು. ಚಿಕ್ಕಮಗಳೂರಿನ ಹಲವು ಭಾಗಗಳಲ್ಲಿ ಭೇಟಿ ನೀಡಿದ ಸಮಿತಿಯು ರೈತರ ಹಾಗೂ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಸೆಕ್ಷನ್ ಫೋರ್, ಅರಣ್ಯ ಅಧಿಕಾರಿಗಳು ಫಾರೆಸ್ಟ್ ಸೆಟಲ್ಮೆಂಟ್ ಆಫೀಸರ್ ಯಾರು ಸಹಾ ಸರಿಯದ ಕ್ರಮ ಕೈಗೊಳ್ಳದಿರುವುದರಿಂದ ಬೇಸರ ಹಾಗೂ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಮತ್ತು ನಾಗರಿಕರು ತಿಳಿಸಿರುವಂತೆ ಎಲ್ಲವೂ ಮೀಸಲು ಅರಣ್ಯ ಪ್ರದೇಶ ಮಾಡುವುದು ತಪ್ಪು, ಕೆಲವು ಭಾಗಗಳಲ್ಲಿ ಮಾಡಲಿ ಹಾಗೂ ರಾತ್ರೋರಾತ್ರಿ ಅರಣ್ಯ ಅಧಿಕಾರಿಗಳು ಬೆಳೆ ನಾಶ ಮಾಡುವುದು ರೂಢಿಗತ ಮಾಡಿಕೊಂಡಿದ್ದಾರೆ. ಆಗಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದು ಪ್ರತಿ ಬಾರಿ ಮನವೊಲಿಸುವ ಕೆಲಸವಾಗುತ್ತಿದೆ ಅಷ್ಟೇ. ಶಾಶ್ವತ ಪರಿಹಾರಕ್ಕಾಗಿ ಕ್ಷೇತ್ರಕ್ಕೆ ಸಮಿತಿ ರಚನೆ ಮಾಡುವಂತೆ ಸಭೆ ನಡೆಸಿದ್ದೇವೆ. ತಾತ್ಕಾಲಿಕವಾಗಿ ಸಮಿತಿಯ ಅಧ್ಯಕ್ಷರಾಗಿ ನೇಮಕ ಗೊಂಡಿದ್ದೇನೆ.

ದಿನಾಂಕ ಫೇ 18 ರಂದು ಹೊಸ ಸಮಿತಿಯ ರಚನೆ ಯಾಗುವುದು ಎಂದು ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾಗಿರುವ ನಾಗೇಶ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ನಾಗೇಶ್, ರತ್ನಾಕರ್ ಗಡಿಗೇಶ್ವರ ನವೀನ್, ಸಹ ಇದ್ದರು.

Leave a Reply

Your email address will not be published. Required fields are marked *

Scan the code