ವಿಶ್ವಗುರು ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರದೊಂದಿಗೆ ಮೆರವಣಿಗೆ.
(CHITRADURGA): ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ವೆಂಕಟಾಪುರ ಗ್ರಾಮಸ್ಥರಿಂದ ಮಹಾ ಮಾನವ, ವಿಶ್ವಗುರು ಬಸವಣ್ಣನವರ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಗ್ರಾಮದ ವೀರಶೈವ ಸಮಾಜದ ವತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಕೆಆರ್ ಗ್ರೂಪ್ ಮಾಲೀಕರಾದ ಎಂ ಡಿ ಮಂಜುನಾಥ್, ಹರಿಹರ ರೆಡ್ಡಿ, ಹೊನ್ನರೆಡ್ಡಿ, ಜಿಟಿ ತಿಮ್ಮಾರೆಡ್ಡಿ, ಮಂಜುನಾಥ್, ಭೀಮರೆಡ್ಡಿ, ವಿಶ್ವನಾಥ್ ರೆಡ್ಡಿ,ಸೋಮೇಶ್, ಪೆದ್ದ ರೆಡ್ಡಿ, ಪ್ರಭು,ಇನ್ನೂ ಊರಿನ ಹಿರಿಯ ಮತ್ತು ಕಿರಿಯ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಸಿದ್ದೇಶ್ ಜಿ ವೆಂಕಟಾಪುರ