ನ್ಯೂಸ್ಶಿವಮೊಗ್ಗ

ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ರವರನ್ನು ಕೂಡಲೇ ಕರ್ನಾಟಕದಿಂದ ಗಡಿಪಾರು ಮಾಡುವಂತೆ ಮನವಿ.

ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ರವರನ್ನು ಕೂಡಲೇ ಕರ್ನಾಟಕದಿಂದ ಗಡಿಪಾರು ಮಾಡುವಂತೆ ಮನವಿ.

(SHIVAMOGA): ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಯವರು ಮಾತು ಮಾತಿಗೂ ಸಂವಿದಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಿರುವುದು ಸಂವಿದಾನ ವಿರೋದಿ ನಡೆಯಾಗಿರುತ್ತದೆ. ಸಮಾಜದ ಜನ ಸಾಮಾನ್ಯರಲ್ಲಿ ಒಡಕನ್ನು ಬಿತ್ತುವ ಕೆಲಸ ಮಾಡುತ್ತಿದ್ದು, ಜಾತ್ಯಾತೀತ್ಯಾ ನಿಲುವಿಗೆ ವಿರೋದಿ ಹೇಳಿಕೆ ನೀಡುತ್ತಿದ್ದು, ಸಮಾಜದ ಸ್ವಾಸ್ಥಕ್ಕೆ ದಕ್ಕೆ ಬರುವ ಹಾಗೆ ನಡೆದುಕೊಂಡು ಬರುತ್ತಿರುವುದು ಕಂಡು ಬಂದಿರುತ್ತದೆ. ಇಂತಹ ಪ್ರತಿನಿಧಿಗಳು ಸಂವಿಧಾನದ ಜನ ವಿರೋದಿ ನಡೆ ಅನುಸರಿಸುತ್ತಿರುವುದರಿಂದ ಕೂಡಲೇ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಬಂಧಿಸಿ ಗಡಿಪಾರು ಮಾಡಬೇಕಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ಸಾಗರ, ಜಿಲ್ಲಾ ಶಾಖೆ ಶಿವಮೊಗ್ಗ ಮಾನ್ಯ ರಾಷ್ಟ್ರಪತಿಗಳಿಗೆ ಒಕ್ಕೊರಲಿನಿಂದ ಒತ್ತಾಯಿಸಯಿಸಿ ಇಂದು ಸಾಗರದ ತಾಲ್ಲೂಕು ದಂಡಾಧಿಕಾರಿಗಳ  ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಲಾಯಿತು.

ಅನಂತ್ ಕುಮಾರ್ ಹೆಗ್ಡೆ



ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ನಾಗರಾಜ್,  ಆರೀಪ್, ಸುರೇಶ್ ಸ್ವಾಮಿ, ಹುಚ್ಚರಾಯಪ್ಪ, ಮಂಜಪ್ಪ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ವರದಿ : ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code