ಚಿಕ್ಕಮಗಳೂರುನ್ಯೂಸ್

ಒಂದೆ ರಾತ್ರಿ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಸರಣಿ ಕಳ್ಳತನ

ಒಂದೆ ರಾತ್ರಿ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಸರಣಿ ಕಳ್ಳತನ

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಬಸ್ ನಿಲ್ದಾಣದಲ್ಲಿರುವಂತಹ ಅಂಗಡಿಗಳಲ್ಲಿ ರಾತ್ರಿ ಸರಣಿ ಕಳ್ಳತನವಾಗಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿಯ ಸಮಯದಲ್ಲಿ ಅಂಗಡಿಯ ಮೇಲ್ಚಾವಣಿಯ ಹಂಚನ್ನು ತೆಗೆದು ಕಳ್ಳರು ನುಸುಳಿದ್ದು  ಅಂಗಡಿಯ ಕೆಲ ವಸ್ತುಗಳನ್ನು ಲಪಟಾಯಿಸಿದ್ದಾರೆ.  ಅಂಗಡಿಯ ಮಾಲೀಕರು ದಿನನಿತ್ಯದಂತೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನವಾಗಿದ್ದು ತಿಳಿದು ಬಂದಿದೆ. ರೂಪಂ ಟೈಲರ್ ಶಾಪ್,  ಆಂಜನೇಯ ಪುಟ್ ವೇರ್ ಸ್ಟೋರ್,  ಬ್ಯೂಟಿಫುಲ್, ಮೊಬೈಲ್ ಶಾಪ್ ಗಳಲ್ಲಿ ಕಳ್ಳತನವಾಗಿದೆ.

ಅಂಗಡಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿದ ಬಾಳೆಹೊನ್ನೂರು ಠಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Scan the code