ಶಿಥಿಲಗೊಂಡಿರುವ ಮನೆಯಲ್ಲಿ ಬದುಕುತ್ತಿರುವ ಪರಿಶಿಷ್ಟ ಪಂಗಡದ ಒಂಟಿ ಮಹಿಳೆ, ಅಧಿಕಾರಿಗಳ ನಿರ್ಲಕ್ಷ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕ್ ಮೆಲ್ಪಾಲ್ ಗ್ರಾಮ ಪಂಚಾಯಿತಿ ಕರ್ಕೇಶ್ವರ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗುಲಾಬಿ ರವರ ಮನೆ ಆಗಲೋ ಈಗಲೇ ಕುಸಿಯುವಂತಿದೆ. ಗುಲಾಬಿ ಹಾಗೂ ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಹಸೀಲ್ದಾರ್ ರವರ ಗಮನಕ್ಕೆ ಅನೇಕ ಬಾರಿ ತಂದರು ಮನವಿಗೆ ಸ್ಪಂದಿಸುತ್ತಿಲ್ಲ.
ಕೂಲಿನಾಲಿ ಮಾಡಿ ಬದುಕು ದೂಡುತ್ತಿರುವ ವೃದ್ದೆ ಗುಲಾಬಿ ರವರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೊರಗೆ ಬಂದು ಮತ್ತೊಂದು ಸೂರು ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಅದೇ ಮನೆಯಲ್ಲಿ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪಿ ಡಿ ಓ, ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಕೊಟ್ಟರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಗ್ರಾಮಸ್ಥರು ಶಿಥಿಲಗೊಂಡಿರುವ ಮನೆಗೆ ಟಾರ್ಪಲ್ ಗಳನ್ನು ಹಾಸಿ ಕೊಟ್ಟಿದ್ದರೆ. ಶಿಥಿಲಗೊಂಡಿರುವ ಗುಲಾಬಿ ಅವರ ಮನೆಯ ಪಕ್ಕದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಯಿದ್ದು ಅಧ್ಯಕ್ಷರು ನೋಡಿದರೂ ನೋಡದಂತಿರುವುದು ಅನ್ಯಾಯವಾಗಿದೆ.
ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರು ಶೀಘ್ರ ಪ್ರತಿಭಟನೆ ಮಾಡುದಾಗಿ ಎಚ್ಚರಿಕೆ ನೀಡಿದ್ದಾರೆ.