ರೈಲ್ವೆ ಹಳಿಯ ಮೇಲೆ ಅನುಮಾನಸ್ಪದವಾಗಿ ಶವ ಪತ್ತೆ ..
(SHIVAMOGA): ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ಅನುಮಾನಸ್ಪದವಾಗಿ ವ್ಯಕ್ತಿ ಒಬ್ಬನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎನ್ನಲಾಗುತ್ತಿದ್ದು ಮೃತ ವ್ಯಕ್ತಿಯ ಬೈಕ್ ಹಾಗೂ ಮೊಬೈಲ್ ರೈಲ್ವೆ ಹಳಿಯ ಪಕ್ಕದಲ್ಲಿ ಲಭ್ಯವಾಗಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಯಾಗಿದೆ.
ರೈಲು ಗುದ್ಧಿ ವ್ಯಕ್ತಿ ಮೃತಪಟ್ಟಿದ್ದರೆ ದೇಹ ಚೆಲ್ಲಾ ಪಿಲ್ಲಿಯಾಗಿ ಬೇರೆ ಕಡೆ ಬೀಳಬೇಕಾಗಿತ್ತು. ರೈಲು ಮೈಮೇಲೆ ಹರಿದಿದ್ದರೆ ವೃತ ದೇಹ ತುಂಡಾಗುತ್ತಿತ್ತು ಹೀಗಾಗಿ ಕೊಲೆ ಮಾಡಿ ದೇಹ ಇಲ್ಲಿ ತಂದು ಹಾಕಿರಬಹುದು ಎಂದು ಸಾರ್ವಜನಿಕರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ರೈಲ್ವೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಅವರ ತನಿಖೆ ನಂತರ ನಿಜಾಂಶ ಹೊರಬೀಳಲಿದೆ.
ವರದಿ: ಅಮಿತ್ ಆನಂದಪುರ