ಕೋಲಾರನ್ಯೂಸ್

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 37 ನಾಮಪತ್ರ ಸಲ್ಲಿಕೆ.

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 37 ನಾಮಪತ್ರ ಸಲ್ಲಿಕೆ.


(KOLARA): ಬಂಗಾರಪೇಟೆ: ರಾಜ್ಯ ಸರ್ಕಾರಿ ನೌಕರರ ಸಂಘದ 2024- 2029ನೇ ಅವದಿಗೆ ತಾಲ್ಲೂಕು ಶಾಖೆಯ ನಿರ್ದೆಶಕರು ಮತ್ತು ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದುವರೆಗೂ ಒಟ್ಟು 37 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಇಂದು ಪ್ರಾಥಮಿಕ ಶಿಕ್ಷಣ ಇಲಾಖೆ ವತಿಯಿಂದ ಆಂಜನೇಯ ಗೌಡ, ವೆಂಕಟೇಶಪ್ಪ, ಸಂಜೀವಪ್ಪ, ರಮೇಶ್,ಸುಜಾತಾ, ತಿಮ್ಮರಾಯಪ್ಪ, ಅರಣ್ಯ ಇಲಾಖೆಯಿಂದ ಶ್ರೀ ಲಕ್ಷ್ಮಿ ,ಅಬಕಾರಿ ಇಲಾಖೆಯಿಂದ ಗೋಪಿ, ಆರೋಗ್ಯ ಇಲಾಖೆಯಿಂದ ಅನಿತಾ, ಪ್ರೌಢಶಾಲಾ ಶಿಕ್ಷಣ ಇಲಾಖೆಯಿಂದ ನಂಜುಂಡಪ್ಪ, ವೆಂಕಟೇಶ್ ಕೆ, ನಿರ್ಮಲಾ,ನ್ಯಾಯಂಗ ಇಲಾಖೆಯಿಂದ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯಿಂದ ಅಂಜಲಿದೇವಿ, ಬಿಸಿಎಂ ಇಲಾಖೆಯಿಂದ ಪ್ರಭಾಮಣಿ, ಆರ್ ಡಿ ಪಿ ಆರ್ ಇಲಾಖೆ ವತಿಯಿಂದ ಶಂಕರ್, ವಾಣಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಮಂಜುನಾಥಚಾರಿ ರವರು ತಿಳಿಸಿದರು.

ಈ ವೇಳೆ ಅಭ್ಯರ್ಥಿಯಾದ ಆಂಜನೇಯ ಗೌಡ ಮಾತನಾಡಿ, 2024 -29ನೇ ಅವಧಿಗೆ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಸರ್ಕಾರಿ ನೌಕರರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸೌಲಭ್ಯಗಳನ್ನು ದೊರಕಿಸಿಕೊಡುವ ಸಲುವಾಗಿ ಹಾಗೂ ಅವರಿಗೆ ಯಾವುದೇ ರೀತಿ ತೊಂದರೆಯಾದಾಗ ಅವರ ಬೆನ್ನೆಲುಬಗೆ ನಿಲ್ಲಬೇಕು ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎನ್ನುವ ಸಲುವಾಗಿ ನಾಮಪತ್ರವನ್ನು ಸಲ್ಲಿಸಿದ್ದೇವೆ ದಯಮಾಡಿ ಎಲ್ಲಾ ಸರ್ಕಾರಿ ನೌಕರರು ನಮ್ಮ ಸೇವೆಯನ್ನು ಪರಿಗಣಿಸಿ ನಮಗೆ ಮತವನ್ನು ನೀಡಿ ಆಶೀರ್ವಾದವನ್ನು ಮಾಡಬೇಕೆಂದು ಕೋರಿದರು.

ಅಭ್ಯರ್ಥಿಯಾದ ಸಂಜೀವಪ್ಪ ಮಾತನಾಡಿ, ರಾಜ್ಯ ಸರ್ಕಾರಿ ನೌಕರ ಸಂಘದ ವತಿಯಿಂದ ಚುನಾವಣೆ ಬಂದಿರುವ ಹಿನ್ನೆಲೆ ಇದೇ ತಿಂಗಳು 28ರಂದು ಚುನಾವಣೆ ನಡೆಯುತ್ತಿದ್ದು. ಇಂದು ನಾಮಪತ್ರ ಸಲ್ಲಿಸಿ,ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಒಂದೇ ನಮ್ಮ ತಾಲೂಕಿನಲ್ಲಿ ಇರುವ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಒಂದು ಕೆಲಸವನ್ನು ನಾವು ಮಾಡುತ್ತೇವೆ ಆದ್ದರಿಂದ ದಯವಿಟ್ಟು ಎಲ್ಲಾ ಸರ್ಕಾರಿ ನೌಕರರು ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಅಭ್ಯರ್ಥಿಯಾದ ಸುಜಾತ ರವರು ಮಾತನಾಡಿ, ಇಂದು ಸರ್ಕಾರಿ ಮಹಿಳಾ ನೌಕರ ಸಂಘದ ವತಿಯಿಂದ ನಾವು ಒಟ್ಟು 8 ಜನ ನಾಮಪತ್ರವನ್ನು ಸಲ್ಲಿಸಿದ್ದೇವೆ. ಮೊದಲ ಬಾರಿಗೆ ಮಹಿಳಾ ನೌಕರರ ಸಂಘದ ವತಿಯಿಂದ ನಾಮಪತ್ರ ಸಲ್ಲಿಸಿದ್ದೇವೆ. ತಾಲೂಕಿನಲ್ಲಿ ಮಹಿಳಾ ಸರ್ಕಾರಿ ನೌಕರರು ಹೆಚ್ಚಾಗಿದ್ದೇವೆ. ಎಲ್ಲಾ ಸಮಸ್ಯೆಗಳನ್ನು ಸಹ ನಾವು ಪುರುಷರ ಬಳಿ ಹೋಗಿ ಕೇಳಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿ ಮಹಿಳಾ ಸದಸ್ಯರು ಇದ್ದರೆ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಕ್ತವಾಗುತ್ತದೆ ಎಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ದಯವಿಟ್ಟು ಎಲ್ಲಾ ನೌಕರರು ಇದೇ ತಿಂಗಳು 28ರಂದು ನಮಗೆ ಮತದಾನ ಮಾಡಬೇಕೆಂದು ಮನವಿ ಮಾಡಿದರು.



ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಜನಾರ್ದನ್, ಹಾಗೂ ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *

Scan the code