ಕೋಲಾರನ್ಯೂಸ್

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 64 ನಾಮಪತ್ರಗಳು ಸಲ್ಲಿಕೆ.

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 64 ನಾಮಪತ್ರಗಳು ಸಲ್ಲಿಕೆ.

(KOLARA): ಬಂಗಾರಪೇಟೆ :ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 64 ನಾಮಪತ್ರಗಳು ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಸ್ ತೆಗೆದುಕೊಳ್ಳುವ ಕೊನೆ ದಿನವಾದ ಹಿನ್ನೆಲೆ 34 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದಾರೆ.ಉಳಿದ 30 ಜನ ಅಭ್ಯರ್ಥಿಗಳು ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಜನಾರ್ದನ್ ನಾಯ್ಡು ರವರು ತಿಳಿಸಿದ್ದಾರೆ.

ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ಸುದ್ದಿಗಾರಿಗೆ ಮಾಹಿತಿ ನೀಡಿ ದರು.ಅವಿರೋಧವಾಗಿ ಆಯ್ಕೆಯಾದವರ ವಿವರ: ಕೃಷಿ ಇಲಾಖೆಯಿಂದ ಪ್ರತಿಭಾ ಎಸ್,ಪಶುಪಾಲನೆ ಇಲಾಖೆಯಿಂದ ವಿ.ನಾರಾಯಣಸ್ವಾಮಿ, ಲೋಕಉಪಯೋಗಿ ಇಲಾಖೆಯಿಂದ ಪವನ್ ಮಂಗಳ ವೇಡ, ಪಂಚಾಯತ್ ರಾಜ್ ಇಲಾಖೆಯಿಂದ ಕೆ.ವಿ.ಗಣೇಶ್, ಪ್ರಾರ್ಥಮಿಕ ಶಿಕ್ಷಣ ಇಲಾಖೆ ವತಿಯಿಂದ ಅಪ್ಪಯ್ಯಗೌಡ, ಸುಜಾತ,ವೆಂಕಟೇಶಪ್ಪ ಟಿ, ರಮೇಶ್ , ಪ್ರೌಢ ಶಿಕ್ಷಣ ಇಲಾಖೆಯಿಂದ ವೆಂಕಟೇಶ್.ಕೆ, ಶಂಕರಪ್ಪ,ಬಿಇಒ ಕಚೇರಿಯಿಂದ ದೇವರಾಜ್, ಪದವಿ ಪೂರ್ವ ಇಲಾಖೆಯಿಂದ ಬೋಡಿರೆಡ್ಡಿ, ಪದವಿ ಕಾಲೇಜು ಇಲಾಖೆಯಿಂದ ವೇಣುಗೋಪಾಲ್, ಅರಣ್ಯ ಇಲಾಖೆಯಿಂದ ಶ್ರೀ ಲಕ್ಷ್ಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಂ ಕೃಷ್ಣ, ಸವಿತಾ,ಆರ್ ರವಿ, ಪಜಾನಿ, ತೋಟೆಗಾರಿಕೆ ಇಲಾಖೆಯಿಂದ ಎ.ಟಿ.ಮುನಿರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಡಿಪಿಒ ಮುನಿರಾಜಪ್ಪ, ಭೂ ದಾಖಲೆ ವಿಭಾಗವತಿಯಿಂದ ಹರೀಶ್, ನ್ಯಾಯಾಂಗ ಇಲಾಖೆ ವತಿಯಿಂದ ಆಯುಷಾ ಬೇಗಂ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಾಣಿ, ಶಂಕರ್, ಅಬಕಾರಿ ಇಲಾಖೆ ವತಿಯಿಂದ ಗೋಪಿ,ಆಹಾರ ನಾಗರಿಕ ಸರಬರಾಜು ವತಿಯಿಂದ ಎ.ವಿ.ಅಯ್ಯಪ್ಪ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಜಲಿದೇವಿ,ಬಿಸಿಎಂ ಇಲಾಖೆಯಿಂದ ಪ್ರಭಾಮಣಿ, ಕಂದಾಯ ಇಲಾಖೆ ವತಿಯಿಂದ ಎಚ್.ಜಿ .ಪವನ್ ಕುಮಾರ್, ಸಿ.ಎಂ.ಸುಷ್ಮಾ ಒಟ್ಟು 30 ಸ್ಥಾನಗಳಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಅವಿರೋಧವಾಗಿ ಆಯ್ಕೆಯಾದ ಅಪ್ಪಯ್ಯ ಗೌಡ ಮಾತನಾಡಿ, ಸರ್ಕಾರಿ ನೌಕರ ಸಂಘದ ಚುನಾವಣೆಗೆ ವಿವಿಧ ಇಲಾಖೆಗಳಿಂದ ಒಟ್ಟು 64 ಜನ ಅಭ್ಯರ್ಥಿಗಳು  ನಮ್ಮ ಪತ್ರ ಸಲ್ಲಿಸಿದ್ದರು. ತಾಲೂಕಿನಲ್ಲಿ ಇದ್ದಂತಹ 30 ಸ್ಥಾನಗಳಿಗೂ ಸಹ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸಹ ನೌಕರ ಸಂಘದಿಂದ ಕೆಲಸಗಳನ್ನು ಸಕ್ರಿಯವಾಗಿ ಮಾಡಿಕೊಂಡು ಬಂದಿದ್ದೇವೆ. ಶಾಸಕರ ನೇತೃತ್ವದಲ್ಲಿ ಇಂದು ಎಲ್ಲಾ ವಿವಿಧ ಇಲಾಖೆಗಳಲ್ಲಿ ಸಹ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ್ದಾರೆ. ಯಾವುದೇ ಇಲಾಖೆಯಲ್ಲಿ ಸಹ ಚುನಾವಣೆ ನಡೆಯದಂತೆ 30 ಜನರು ಸಹ ತಾಲೂಕು ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದೇವೆ. ಮುಂದಿನ ಚುನಾವಣೆ ಪ್ರಕ್ರಿಯೆಗಳು 30ನೇ ತಾರೀಕಿನಿಂದ ತಾಲೂಕು ಅಧ್ಯಕ್ಷ ಸ್ಥಾನ, ಖಜಾಂಚಿ, ಹಾಗೂ ರಾಜ್ಯ ಪರಿಷತ್ತು ಚುನಾವಣೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಈ ಸ್ಥಾನಗಳಿಗೂ ಸಹ ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಮಂಜುನಾಥ ಆಚಾರಿ, ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿ ಸುಜಾತ, ವೆಂಕಟೇಶ್, ರವಿ, ಹಾಗೂ ಶಿಕ್ಷಕರಾದ ಶಾಮ್ ಮೂರ್ತಿ,ಕಾಂತರಾಜ್, ನಾರಾಯಣಸ್ವಾಮಿ,ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code