ಕಡೂರಿನಲ್ಲಿ ಕಾಣೆಯಾದ ಎರಡು ವರ್ಷದ ಮಗು ತರೀಕೆರೆಯಲ್ಲಿ ಪತ್ತೆ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಹೆಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡದ ರಘು ನಾಯಕ್ ಹಾಗೂ ಅವರ ಮಗಳು ಮಾನಸ ಕೊಬ್ಬರಿ ಎಣ್ಣೆ ಬಿಡಿಸಲು ಕಡೂರು ಪಟ್ಟಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೊಬ್ಬರಿ ಎಣ್ಣೆ ಬಿಡಿಸುವ ಗಣಕ್ಕೆ ಬಂದಿದ್ದಾರೆ.
ಕೊಬ್ಬರಿ ಎಣ್ಣೆ ಗಾಣದಲ್ಲಿ ಎಣ್ಣೆ ಬಿಡಿಸಲು ತಂದೆ ಮಗು ಬಂದಿದ್ದ ವೇಳೆ ಮಹಿಳೆ ಒಬ್ಬಳು ಎರಡು ವರ್ಷದ ಮಗುವನ್ನು ಅಪಹರಿಸಿರುವ ಘಟನೆ ಜಿಲ್ಲೆ ಕಡೂರು ಪಟ್ಟಣದಲ್ಲಿ ನಡೆದಿದೆ. ಮಗು ಕಾಣಿಸದಿದ್ದಾಗ ಹುಡುಕಾಟ ನಡೆಸಿದ ತಂದೆ ರಘು ನಾಯಕ್ ಬಟ್ಟೆ ಅಂಗಡಿ ಮುಂದಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮಹಿಳೆ ಮಗುವನ್ನು ಅಪಹರಿಸಿರುವುದು ಕಂಡುಬಂದಿದೆ. ಕಡೂರು ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಮಗು ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಈ ಸಮಯಕ್ಕೆ ಕಡೂರಿನಲ್ಲಿ ಕಾಣೆಯಾಗಿದ್ದ 2 ವರ್ಷದ ಮಗುವನ್ನು ತರೀಕೆರೆ ಠಾಣಾ ವ್ಯಾಪ್ತಿಯ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ದಂಪತಿಗಳು ಇಂದು ತರೀಕೆರೆ ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಸದ್ರಿ ದಂಪತಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.