ಶೃಂಗೇರಿಯಲ್ಲಿ ಒಂದು ಸುಸಜ್ಜಿತ ಸುವ್ಯವಸ್ಥಿತ ಆಸ್ಪತ್ರೆ
(SRINGERI): ಅನೇಕ ಸಮಯಗಳಿಂದ ಶೃಂಗೇರಿಗೆ ಒಂದು ಸುಸಜ್ಜಿತ ಸುವ್ಯವಸ್ಥಿತ ಆಸ್ಪತ್ರೆ ಬೇಕೆಂಬ ಕೂಗು ಕೇಳುತ್ತಿತ್ತು. ಈಗ ಅಭಿನವ ವಿದ್ಯಾತೀರ್ಥ ಮಲ್ಟೀಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಿದೆ. ಇಲ್ಲಿಯ emergency consultant ಡಾ. ಪ್ರಣವ್ ಸರ್ ತಂಡ ಬಹಳ ಚೆನ್ನಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಅಗತ್ಯವಿರುವ ಎಲ್ಲಾ ರಕ್ತ ಪರೀಕ್ಷೆಗಳು, ಎಕ್ಸರೇ, ಸ್ಕ್ಯಾನಿಂಗ್,ಸಿಟಿ ಸ್ಕ್ಯಾನಿಂಗ್ ಎಲ್ಲಾ ಸೌಲಭ್ಯಗಳಿದ್ದು ರೇಡಿಯಾಲಜಿಸ್ಟ ಕೂಡ ಇದ್ದಾರೆ. ಅತ್ಯಂತ ನುರಿತ ಆರ್ಥೋಪಿಡಿಷಿಯನ್ ಡಾ. ದೀಪಕ್ ಸರ್ ಇದ್ದು ಅನೇಕ ಸರ್ಜರಿ ಗಳು ಮಾಡಲಾಗುತ್ತಿದೆ. ಒಳ್ಳೆಯ ಅನುಭವಿ ಅನಸ್ತೇಶಿಯಾ ಡಾಕ್ಟರ್ ಇದ್ದು ಸಾಮಾನ್ಯ ಸರ್ಜರಿ ಗಳಾದ ಹರ್ನಿಯಾ, ಅಪೆಂಡಿಸೈಟಿಸ್, ಮೂಲವ್ಯಾಧಿ ಎಲ್ಲಾ ತರಹದ ಸರ್ಜರಿಗಳು ನಡೆಯುತ್ತಿದ್ದು ಡಾ. ನಿರಂಜನ್ ನಿಗದಿತ ಗುರುವಾರಗಳಂದು ನಡೆಸುತ್ತಿದ್ದು ತೀರಾ ದುಬಾರಿಯಲ್ಲದ ದರದಲ್ಲಿ ನಡೆಸುತ್ತಿರುವುದು ಶೃಂಗೇರಿ ಜನತೆಗೆ ಸಿಕ್ಕ ಸೌಲಭ್ಯ.
ಅಲ್ಲದೇ ಕಿವಿ,ಮೂಗು,ಗಂಟಲು ತಜ್ಞರು ಲಭ್ಯವಿದ್ದಾರೆ. ಇನ್ನೂ ಫಿಸಿಷಿಯನ್ ಆಗಿ ಡಾ. ಪೂಜಾಭಟ್,ಮಕ್ಕಳ ತಜ್ಞರಾಗಿ ಡಾ.ಲಕ್ಷ್ಮೀನಾರಾಯಣ್, ಪ್ರಸೂತಿ ತಜ್ಞೆಯಾಗಿ ಸೌಮ್ಯ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪ್ರತಿ ತಿಂಗಳು ಮೊದಲ ಮಂಗಳವಾರ ಹೃದಯ ತಜ್ಞ ಡಾ. ಅಶ್ವಲ್ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಚರ್ಮರೋಗ ತಜ್ಞರು, ಯುರಾಲಜೀಸ್ಟ್. ಭೇಟಿಯೂ ಇದೆ. ಹೀಗೆ ಸಾಮಾನ್ಯವಾಗಿ ಶೃಂಗೇರಿಯಂತ ಪುಟ್ಟ ಊರಿಗೆ ಇಷ್ಟೊಂದು ಸೌಲಭ್ಯಗಳನ್ನು ಕೊಟ್ಟು ನಿರ್ವಹಣೆ ಸುಲಭದ ಮಾತಲ್ಲ. ಆದರೂ ಎಲ್ಲಾ ರೀತಿಯಲ್ಲೂ ಸ್ವಾಗತ ಕಾರ್ಯಾಲಯದಿಂದ ಹಿಡಿದು ಶುಶ್ರೂಷೆ ಮಾಡುವ ನರ್ಸಗಳ ತಂಡ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಡಾ.ಪ್ರಣವ್ ರವರ ಜೊತೆ ಕರ್ತವ್ಯ ನಿರತ ಡಾಕ್ಟರ್ ಗಳಾದ ಡಾ.ಪ್ರವೀಣ್,ಡಾ.ಕಾವ್ಯಶ್ರೀ,ಡಾ. ನಮ್ರತಾ,ಡಾ.ನಿಧೀಶ್ ಕಶ್ಯಪ್,ಡಾ.ಸಮರ್ಥ, ಡಾ.ಅನುಪಮಾ( ಇನ್ನೂ ಇರಬಹುದು) ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಲ್ಲರ ಕಾರ್ಯಗಳು ಶ್ಲಾಘನೀಯವಾಗಿದೆ. OT ಸೌಲಭ್ಯಗಳು ಅಲ್ಲಿಯ ತಂಡವು ಕಾಳಜಿಯಿಂದ ನೋಡಿಕೊಳ್ಳುತ್ತದೆ.ಒಟ್ಟಿನಲ್ಲಿ ಇಲ್ಲ ಎಂದು ಕೊರಗುತ್ತಾ ಇದ್ದ ಜನತೆ ನಮ್ಮದೇ ಆಸ್ಪತ್ರೆ ಎಂದು ತಿಳಿದು ಸಣ್ಣ ಪುಟ್ಟ ಲೋಪಗಳನ್ನು ದೊಡ್ಡದು ಮಾಡದೇ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿ ಬೆಳೆಸಿದರೆ ಎಲ್ಲೊ ಹೋಗಬೇಕಾದ ಅನೇಕ ಸೌಲಭ್ಯಗಳು ಡಯಾಲಿಸಿಸ್ ಅಂಥವುಗಳು ಮುಂದಿನ ದಿನಗಳಲ್ಲಿ ಬರಬಹುದು. ಬೆಳೆಸುವುದು ನಮ್ಮ ಕೈಯಲ್ಲಿದೆ. ಹಾಗೇ ಆಗಲಿ ಇಂತಹ ಸುಸಜ್ಜಿತ ಆಸ್ಪತ್ರೆ ನಮಗಲ್ಲದೇ ಸುತ್ತ ಮುತ್ತಲ ತಾಲೂಕುಗಳ ರೋಗಿಗಳಿಗೂ ನೆರವಾಗುವಂತೆ ಆಗಲಿ ಶ್ರಮಿಸುತ್ತಿರುವ ತಂಡದೊಂದಿಗೆ ನಮ್ಮ ಸಹಕಾರ ನೀಡಿ ಆಶಿಸೋಣವೇ ಅನುಭವದಿಂದ ಬರೆದ ಮಾತುಗಳು.
ಗಣಿತವನ ಶಿವಶಂಕರ್
ಹವ್ಯಾಸಿ ಬರಹಗಾರರು ಲೇಖಕರು ಚಿಂತನಾ ಬಳಗ